<p><strong>ನಂಜನಗೂಡು:</strong> ಪರಿಶಿಷ್ಟ ಜಾತಿಯವರ ಕ್ಷೌರ ಮಾಡಿದ್ದಕ್ಕಾಗಿ, ಸವಿತಾ ಸಮುದಾಯದ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎನ್ನಲಾದ ಪ್ರಕರಣ ತಾಲ್ಲೂಕಿನ ಹಲ್ಲರೆ ಗ್ರಾಮದಲ್ಲಿ ನಡೆದಿದೆ.</p>.<p>ಗ್ರಾಮದ ನಿವಾಸಿ,ಸವಿತಾ ಸಮುದಾಯದಮಲ್ಲಿಕಾರ್ಜುನ ಶೆಟ್ಟಿ ಅವರು ತಹಶೀಲ್ದಾರ್ಗೆ ದೂರುನೀಡಿದ್ದಾರೆ.</p>.<p>‘ಗ್ರಾಮದಲ್ಲಿ ವಿವಿಧ ಸಮುದಾಯಗಳ ಜನವಾಸವಿದ್ದಾರೆ. ಅದರಲ್ಲಿ ನಾಯಕ ಸಮುದಾಯದ ಕೆಲವರು ಪರಿಶಿಷ್ಟ ಜಾತಿಯವರಿಗೆಕ್ಷೌರಮತ್ತು ಶೇವಿಂಗ್ ಮಾಡದಂತೆ ಕೆಲ ದಿನಗಳಿಂದ ಒತ್ತಡ ಹೇರುತ್ತಿದ್ದರು. ಹೀಗಾಗಿ, ಪೊಲೀಸರ ಬಳಿ ಹೋದೆ. ಅವರು ಹೇಳಿದಂತೆ, ಪರಿಶಿಷ್ಟರೂ ಸೇರಿದಂತೆ ಗ್ರಾಮದ ಎಲ್ಲಾ ಸಮುದಾಯದವರಿಗೂ ಕ್ಷೌರ ಮಾಡುವ ಕಾಯಕ ಮುಂದುವರಿಸಿದೆ. ಹೀಗಾಗಿ,ನಾಯಕ ಸಮುದಾಯದ ಕೆಲವರು ಸಭೆ ಸೇರಿ ನಮ್ಮ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಲ್ಲದೇ ದಂಡವನ್ನೂ ವಿಧಿಸಿದ್ದಾರೆ’ ಎಂದು ದೂರಿನಲ್ಲಿ ವಿವರಿಸಿದ್ದಾರೆ.</p>.<p>‘ನಮ್ಮ ಕುಟುಂಬಕ್ಕೆಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ನಮಗೆ ನ್ಯಾಯ ದೊರಕಿಸಿಕೊಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ.</p>.<p>ತಹಶೀಲ್ದಾರ್ ಕೆ.ಎಂ.ಮಹೇಶ್ ಕುಮಾರ್ ಅವರು ಈ ದೂರುಸ್ವೀಕರಿಸಿಗ್ರಾಮಸ್ಥರೊಡನೆ ಮಾತುಕತೆ ನಡೆಸಿದ್ದಾರೆ.</p>.<p>‘ಪ್ರಕರಣಕ್ಕೆ ಸಂಬಂಧಿಸಿದಂತೆನಮ್ಮಲ್ಲಿ ಯಾವುದೇದೂರುದಾಖಲಾಗಿಲ್ಲ.ವೈಯಕ್ತಿಕಭಿನ್ನಾಭಿಪ್ರಾಯಗಳಿಂದಈ ಪ್ರಕರಣ ನಡೆದಿದೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆಗ್ರಾಮಕ್ಕೆ ತೆರಳಿ ಸಹಬಾಳ್ವೆಯಿಂದ ಬದುಕುವಂತೆ ಸಲಹೆ ನೀಡಿದ್ದೇವೆ’ ಎಂದು ನಂಜನಗೂಡುಸಿಪಿಐ ಲಕ್ಷ್ಮಿಕಾಂತ್ ತಲವಾರ್ ಹೇಳಿದರು.</p>.<p>ತಹಶೀಲ್ದಾರ್ ಮಹೇಶ್ ಕುಮಾರ್ ಅವರು ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಂಜನಗೂಡು:</strong> ಪರಿಶಿಷ್ಟ ಜಾತಿಯವರ ಕ್ಷೌರ ಮಾಡಿದ್ದಕ್ಕಾಗಿ, ಸವಿತಾ ಸಮುದಾಯದ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎನ್ನಲಾದ ಪ್ರಕರಣ ತಾಲ್ಲೂಕಿನ ಹಲ್ಲರೆ ಗ್ರಾಮದಲ್ಲಿ ನಡೆದಿದೆ.</p>.<p>ಗ್ರಾಮದ ನಿವಾಸಿ,ಸವಿತಾ ಸಮುದಾಯದಮಲ್ಲಿಕಾರ್ಜುನ ಶೆಟ್ಟಿ ಅವರು ತಹಶೀಲ್ದಾರ್ಗೆ ದೂರುನೀಡಿದ್ದಾರೆ.</p>.<p>‘ಗ್ರಾಮದಲ್ಲಿ ವಿವಿಧ ಸಮುದಾಯಗಳ ಜನವಾಸವಿದ್ದಾರೆ. ಅದರಲ್ಲಿ ನಾಯಕ ಸಮುದಾಯದ ಕೆಲವರು ಪರಿಶಿಷ್ಟ ಜಾತಿಯವರಿಗೆಕ್ಷೌರಮತ್ತು ಶೇವಿಂಗ್ ಮಾಡದಂತೆ ಕೆಲ ದಿನಗಳಿಂದ ಒತ್ತಡ ಹೇರುತ್ತಿದ್ದರು. ಹೀಗಾಗಿ, ಪೊಲೀಸರ ಬಳಿ ಹೋದೆ. ಅವರು ಹೇಳಿದಂತೆ, ಪರಿಶಿಷ್ಟರೂ ಸೇರಿದಂತೆ ಗ್ರಾಮದ ಎಲ್ಲಾ ಸಮುದಾಯದವರಿಗೂ ಕ್ಷೌರ ಮಾಡುವ ಕಾಯಕ ಮುಂದುವರಿಸಿದೆ. ಹೀಗಾಗಿ,ನಾಯಕ ಸಮುದಾಯದ ಕೆಲವರು ಸಭೆ ಸೇರಿ ನಮ್ಮ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಲ್ಲದೇ ದಂಡವನ್ನೂ ವಿಧಿಸಿದ್ದಾರೆ’ ಎಂದು ದೂರಿನಲ್ಲಿ ವಿವರಿಸಿದ್ದಾರೆ.</p>.<p>‘ನಮ್ಮ ಕುಟುಂಬಕ್ಕೆಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ನಮಗೆ ನ್ಯಾಯ ದೊರಕಿಸಿಕೊಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ.</p>.<p>ತಹಶೀಲ್ದಾರ್ ಕೆ.ಎಂ.ಮಹೇಶ್ ಕುಮಾರ್ ಅವರು ಈ ದೂರುಸ್ವೀಕರಿಸಿಗ್ರಾಮಸ್ಥರೊಡನೆ ಮಾತುಕತೆ ನಡೆಸಿದ್ದಾರೆ.</p>.<p>‘ಪ್ರಕರಣಕ್ಕೆ ಸಂಬಂಧಿಸಿದಂತೆನಮ್ಮಲ್ಲಿ ಯಾವುದೇದೂರುದಾಖಲಾಗಿಲ್ಲ.ವೈಯಕ್ತಿಕಭಿನ್ನಾಭಿಪ್ರಾಯಗಳಿಂದಈ ಪ್ರಕರಣ ನಡೆದಿದೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆಗ್ರಾಮಕ್ಕೆ ತೆರಳಿ ಸಹಬಾಳ್ವೆಯಿಂದ ಬದುಕುವಂತೆ ಸಲಹೆ ನೀಡಿದ್ದೇವೆ’ ಎಂದು ನಂಜನಗೂಡುಸಿಪಿಐ ಲಕ್ಷ್ಮಿಕಾಂತ್ ತಲವಾರ್ ಹೇಳಿದರು.</p>.<p>ತಹಶೀಲ್ದಾರ್ ಮಹೇಶ್ ಕುಮಾರ್ ಅವರು ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>