<p><strong>ಮೈಸೂರು:</strong> ರೈಲಿನಲ್ಲಿ ವಾಹನಗಳ ಸಾಗಾಟ ಪ್ರಮಾಣವನ್ನು ಹೆಚ್ಚಿಸಲು ಉಪಕ್ರಮಗಳನ್ನು ತೆಗೆದುಕೊಂಡಿರುವ ನೈರುತ್ಯ ರೈಲ್ವೆ ಮೈಸೂರು ವಿಭಾಗವು ಕಳೆದ ಒಂದು ತಿಂಗಳ ಅವಧಿಯಲ್ಲಿ ದೇಶದ ವಿವಿಧ ಭಾಗಗಳಿಗೆ 5,500 ದ್ವಿಚಕ್ರ ವಾಹನಗಳನ್ನು ಸಾಗಾಟ ಮಾಡಿದೆ.</p>.<p>ಅಸ್ಸಾಂ ರಾಜ್ಯದ ಚಂಗ್ಸಾರಿ, ಪಶ್ಚಿಮ ಬಂಗಾಳದ ಸಂಕ್ರೈಲ್ ಗೂಡ್ಸ್ ಟರ್ಮಿನಲ್, ಉತ್ತರ ಪ್ರದೇಶದ ನೌತರ್ವಾ ಮತ್ತು ಬಿಹಾರದ ಸಾರೈ ನಿಲ್ದಾಣಗಳಿಗೆ ಮೈಸೂರಿನ ಕಡಕೊಳದಿಂದ ದ್ವಿಚಕ್ರ ವಾಹನ ಸಾಗಿಸಲಾಗಿದೆ. ಇದರಿಂದ ಮೈಸೂರು ವಿಭಾಗಕ್ಕೆ ಸುಮಾರು ₹ 1 ಕೋಟಿ ಆದಾಯ ಲಭಿಸಿದೆ ಎಂದು ಪ್ರಕಟಣೆ ತಿಳಿಸಿದೆ.</p>.<p>ಆಟೊಮೊಬೈಲ್ ಸಾಗಾಟಕ್ಕೆ ಅನುಕೂಲವಾಗಲು ರೈಲ್ವೆ ಬೋಗಿಗಳನ್ನು ನವೀನ ರೀತಿಯಲ್ಲಿ (ಎನ್ಎಂಜಿ ರೇಕ್) ಮಾರ್ಪಡಿಸಲಾಗಿತ್ತು. ತಲಾ 25 ಬೋಗಿಗಳನ್ನು ಒಳಗೊಂಡ ಐದು ರೈಲುಗಳಲ್ಲಿ ದ್ವಿಚಕ್ರ ವಾಹನಗಳ ಸಾಗಾಟ ನಡೆದಿದೆ.</p>.<p>ಸರಕು ಸಾಗಣೆ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಮೈಸೂರು ವಿಭಾಗವು ರೈಲ್ವೆ ನಿಲ್ದಾಣದಲ್ಲಿ ವ್ಯಾಪಾರ ಅಭಿವೃದ್ಧಿ ಘಟಕ (ಬಿಡಿಯು) ಸ್ಥಾಪಿಸಿದೆ. ಇದರಿಂದಾಗಿ ಹೊಸ ಹೊಸ ಸರಕುಗಳನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.</p>.<p>ಇದರ ಜೊತೆಗೆ ಶುಂಠಿ, ಅಡಿಕೆ, ಮೆಣಸು ಮತ್ತು ಇತರೆ ಕೃಷಿ ಉತ್ಪನ್ನಗಳನ್ನು ಸಾಗಾಟ ಮಾಡಿ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ರೋಹಾ ಮತ್ತು ಗೋವಾಕ್ಕೆ ಇದೇ ಮೊದಲ ಬಾರಿಗೆ ಕಬ್ಬಿಣದ ಅದಿರು ಕೂಡಾ ಸಾಗಾಟ ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ರೈಲಿನಲ್ಲಿ ವಾಹನಗಳ ಸಾಗಾಟ ಪ್ರಮಾಣವನ್ನು ಹೆಚ್ಚಿಸಲು ಉಪಕ್ರಮಗಳನ್ನು ತೆಗೆದುಕೊಂಡಿರುವ ನೈರುತ್ಯ ರೈಲ್ವೆ ಮೈಸೂರು ವಿಭಾಗವು ಕಳೆದ ಒಂದು ತಿಂಗಳ ಅವಧಿಯಲ್ಲಿ ದೇಶದ ವಿವಿಧ ಭಾಗಗಳಿಗೆ 5,500 ದ್ವಿಚಕ್ರ ವಾಹನಗಳನ್ನು ಸಾಗಾಟ ಮಾಡಿದೆ.</p>.<p>ಅಸ್ಸಾಂ ರಾಜ್ಯದ ಚಂಗ್ಸಾರಿ, ಪಶ್ಚಿಮ ಬಂಗಾಳದ ಸಂಕ್ರೈಲ್ ಗೂಡ್ಸ್ ಟರ್ಮಿನಲ್, ಉತ್ತರ ಪ್ರದೇಶದ ನೌತರ್ವಾ ಮತ್ತು ಬಿಹಾರದ ಸಾರೈ ನಿಲ್ದಾಣಗಳಿಗೆ ಮೈಸೂರಿನ ಕಡಕೊಳದಿಂದ ದ್ವಿಚಕ್ರ ವಾಹನ ಸಾಗಿಸಲಾಗಿದೆ. ಇದರಿಂದ ಮೈಸೂರು ವಿಭಾಗಕ್ಕೆ ಸುಮಾರು ₹ 1 ಕೋಟಿ ಆದಾಯ ಲಭಿಸಿದೆ ಎಂದು ಪ್ರಕಟಣೆ ತಿಳಿಸಿದೆ.</p>.<p>ಆಟೊಮೊಬೈಲ್ ಸಾಗಾಟಕ್ಕೆ ಅನುಕೂಲವಾಗಲು ರೈಲ್ವೆ ಬೋಗಿಗಳನ್ನು ನವೀನ ರೀತಿಯಲ್ಲಿ (ಎನ್ಎಂಜಿ ರೇಕ್) ಮಾರ್ಪಡಿಸಲಾಗಿತ್ತು. ತಲಾ 25 ಬೋಗಿಗಳನ್ನು ಒಳಗೊಂಡ ಐದು ರೈಲುಗಳಲ್ಲಿ ದ್ವಿಚಕ್ರ ವಾಹನಗಳ ಸಾಗಾಟ ನಡೆದಿದೆ.</p>.<p>ಸರಕು ಸಾಗಣೆ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಮೈಸೂರು ವಿಭಾಗವು ರೈಲ್ವೆ ನಿಲ್ದಾಣದಲ್ಲಿ ವ್ಯಾಪಾರ ಅಭಿವೃದ್ಧಿ ಘಟಕ (ಬಿಡಿಯು) ಸ್ಥಾಪಿಸಿದೆ. ಇದರಿಂದಾಗಿ ಹೊಸ ಹೊಸ ಸರಕುಗಳನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.</p>.<p>ಇದರ ಜೊತೆಗೆ ಶುಂಠಿ, ಅಡಿಕೆ, ಮೆಣಸು ಮತ್ತು ಇತರೆ ಕೃಷಿ ಉತ್ಪನ್ನಗಳನ್ನು ಸಾಗಾಟ ಮಾಡಿ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ರೋಹಾ ಮತ್ತು ಗೋವಾಕ್ಕೆ ಇದೇ ಮೊದಲ ಬಾರಿಗೆ ಕಬ್ಬಿಣದ ಅದಿರು ಕೂಡಾ ಸಾಗಾಟ ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>