ಒಂದು ಕುಟುಂಬಕ್ಕೆ ಗರಿಷ್ಠ 5 ಸಸಿಗಳನ್ನು ಕೊಡುವ ಜೊತೆಗೆ ‘ವಿವೇಕಪ್ರಭ’ ಮಾಸ ಪತ್ರಿಕೆ ಮತ್ತು ದಿವ್ಯತ್ರಯರ ಸಂದೇಶದ ‘ಸ್ಫೂರ್ತಿ’ ಎಂಬ ಪುಸ್ತಕವನ್ನು ಉಚಿತವಾಗಿ ನೀಡಲಾಗಿದೆ. ‘ಹಸಿರು ತೋಟ ವಿವೇಕ ಪಾಠ’ ಕಾರ್ಯಕ್ರಮ ಮಾಡಲಾಗಿದೆ. ಇದರಲ್ಲಿ ನಾಗರಿಕರಿಗೆ ಮನೆಯಲ್ಲಿ ಬೇಕಾದ ಹೂವು– ಹಣ್ಣು, ಔಷಧಿಯ ಸಸಿಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿತ್ತು. ದೃಢೀಕರಣ ಪತ್ರ ನೀಡಿದ ನಾಗರಿಕರು ಸಸಿಗಳನ್ನು ಕೊಂಡೊಯ್ದು ಕಾಳಜಿಯಿಂದ ಬೆಳೆಸುತ್ತಿದ್ದಾರೆ. ಆಶ್ರಮದ ಸ್ವಯಂ ಸೇವಕರು ಮನೆಗಳಿಗೆ ಭೇಟಿ ನೀಡಿ ಸಸಿಗಳ ಪೋಷಣೆಯನ್ನೂ ಗಮನಿಸುತ್ತಾರೆ. ಇದುವರೆಗೆ ಮೂವರಿಗೆ ವಿಶೇಷ ಬಹುಮಾನ, ಹಲವರಿಗೆ ಸಮಾಧಾನಕರ ಬಹುಮಾನ ನೀಡಿ ಪ್ರೋತ್ಸಾಹಿಸಲಾಗಿದೆ.