<p><strong>ಕೆ.ಆರ್.ನಗರ: </strong>‘ಜನಸಂಖ್ಯೆಗೆ ಅನುಗುಣವಾಗಿ ಗ್ರಾಮೀಣ ಪೊಲೀಸ್ ಠಾಣೆ ಮತ್ತು ಸಿಬ್ಬಂದಿ ಹೆಚ್ಚಿಸಲು ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುತ್ತೇನೆ’ ಎಂದು ಉನ್ನತ ಶಿಕ್ಷಣ ಸಚಿವ, ಉಪ ಮುಖ್ಯಮಂತ್ರಿ ಡಾ.ಸಿ.ಎಸ್.ಅಶ್ವತ್ಥನಾರಾಯಣ ಭರವಸೆ ನೀಡಿದರು.</p>.<p>ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲವಾಗಲು ಅಗತ್ಯ ವಾಗಿದ್ದ ವಿದ್ಯಾರ್ಥಿನಿಲಯ, ಸಾರಿಗೆ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ಸೌಲಭ್ಯ ಗಳನ್ನು ಒದಗಿಸಿ ಕಾಲೇಜು ಪ್ರಾರಂಭ ಮಾಡಲಾಗಿದೆ’ ಎಂದು ತಿಳಿಸಿದರು.</p>.<p>‘ರಾಮಮಂದಿರ ನಿರ್ಮಾಣವಾಗ ಬೇಕು ಎನ್ನುವುದು ಪ್ರತಿ ಭಾರತೀಯರ ಭಾವನೆಯಾಗಿದೆ, ನಿರ್ಮಾಣದಲ್ಲಿ ತನ್ನದೇ ಆದ ಕಾಣಿಕೆ ತಲುಪಬೇಕು ಎನ್ನುವುದೂ ಪ್ರತಿಯೊಬ್ಬರ ಭಾವನೆ ಯಾಗಿದೆ’ ಎಂದು ಹೇಳಿದರು.</p>.<p>‘ಮೀಸಲಾತಿ ಪ್ರತಿಯೊಂದು ಜಾತಿ ಜನಾಂಗದ ಆಸೆ, ಅಪೇಕ್ಷೆ ಇರುತ್ತದೆ, ನಮ್ಮ ಜಾತಿಗೂ ಇನ್ನೂ ಹೆಚ್ಚಿನ ಮೀಸಲಾತಿ ದೊರೆಯಬೇಕು, ವರ್ಗೀಕರಣ ಆಗಬೇಕು, ಬೇರೆ ವರ್ಗಕ್ಕೆ ಹೋಗಬೇಕು ಎನ್ನುವು ಬಹಳಷ್ಟು ಅಪೇಕ್ಷೆಗಳು ಇರುತ್ತದೆ, ಈ ಎಲ್ಲ ಅಪೇಕ್ಷೆಗಳಿಗೆ ಸರ್ಕಾರ ನ್ಯಾಯಬದ್ಧವಾಗಿ, ಕಾನೂನಾತ್ಮಕವಾಗಿ, ವೈಜ್ಞಾನಿಕವಾಗಿ ಕಾನೂನಿನಲ್ಲಿರುವ ಅವಕಾಶಗಳು ಮಾತ್ರ ಮಾಡಲು ಸಾಧ್ಯವಾಗುತ್ತದೆ, ಯಾವುದು ಸೂಕ್ತವಾಗಿದೆ, ಯಾವುದು ನ್ಯಾಯ ಬದ್ಧವಾಗಿದೆ ಅದನ್ನು ಮಾತ್ರ ಮಾಡಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆ.ಆರ್.ನಗರ: </strong>‘ಜನಸಂಖ್ಯೆಗೆ ಅನುಗುಣವಾಗಿ ಗ್ರಾಮೀಣ ಪೊಲೀಸ್ ಠಾಣೆ ಮತ್ತು ಸಿಬ್ಬಂದಿ ಹೆಚ್ಚಿಸಲು ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುತ್ತೇನೆ’ ಎಂದು ಉನ್ನತ ಶಿಕ್ಷಣ ಸಚಿವ, ಉಪ ಮುಖ್ಯಮಂತ್ರಿ ಡಾ.ಸಿ.ಎಸ್.ಅಶ್ವತ್ಥನಾರಾಯಣ ಭರವಸೆ ನೀಡಿದರು.</p>.<p>ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲವಾಗಲು ಅಗತ್ಯ ವಾಗಿದ್ದ ವಿದ್ಯಾರ್ಥಿನಿಲಯ, ಸಾರಿಗೆ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ಸೌಲಭ್ಯ ಗಳನ್ನು ಒದಗಿಸಿ ಕಾಲೇಜು ಪ್ರಾರಂಭ ಮಾಡಲಾಗಿದೆ’ ಎಂದು ತಿಳಿಸಿದರು.</p>.<p>‘ರಾಮಮಂದಿರ ನಿರ್ಮಾಣವಾಗ ಬೇಕು ಎನ್ನುವುದು ಪ್ರತಿ ಭಾರತೀಯರ ಭಾವನೆಯಾಗಿದೆ, ನಿರ್ಮಾಣದಲ್ಲಿ ತನ್ನದೇ ಆದ ಕಾಣಿಕೆ ತಲುಪಬೇಕು ಎನ್ನುವುದೂ ಪ್ರತಿಯೊಬ್ಬರ ಭಾವನೆ ಯಾಗಿದೆ’ ಎಂದು ಹೇಳಿದರು.</p>.<p>‘ಮೀಸಲಾತಿ ಪ್ರತಿಯೊಂದು ಜಾತಿ ಜನಾಂಗದ ಆಸೆ, ಅಪೇಕ್ಷೆ ಇರುತ್ತದೆ, ನಮ್ಮ ಜಾತಿಗೂ ಇನ್ನೂ ಹೆಚ್ಚಿನ ಮೀಸಲಾತಿ ದೊರೆಯಬೇಕು, ವರ್ಗೀಕರಣ ಆಗಬೇಕು, ಬೇರೆ ವರ್ಗಕ್ಕೆ ಹೋಗಬೇಕು ಎನ್ನುವು ಬಹಳಷ್ಟು ಅಪೇಕ್ಷೆಗಳು ಇರುತ್ತದೆ, ಈ ಎಲ್ಲ ಅಪೇಕ್ಷೆಗಳಿಗೆ ಸರ್ಕಾರ ನ್ಯಾಯಬದ್ಧವಾಗಿ, ಕಾನೂನಾತ್ಮಕವಾಗಿ, ವೈಜ್ಞಾನಿಕವಾಗಿ ಕಾನೂನಿನಲ್ಲಿರುವ ಅವಕಾಶಗಳು ಮಾತ್ರ ಮಾಡಲು ಸಾಧ್ಯವಾಗುತ್ತದೆ, ಯಾವುದು ಸೂಕ್ತವಾಗಿದೆ, ಯಾವುದು ನ್ಯಾಯ ಬದ್ಧವಾಗಿದೆ ಅದನ್ನು ಮಾತ್ರ ಮಾಡಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>