<p><strong>ಹುಣಸೂರು: </strong>ತಾಲ್ಲೂಕಿನಲ್ಲಿ ಕೋವಿಡ್ ಇಳಿಮುಖವಾಗುತ್ತಿದೆ. ಮೇ ತಿಂಗಳಲ್ಲಿ ನಿತ್ಯವೂ ಸರಾಸರಿ 200ರ ಆಸುಪಾಸಿನಲ್ಲಿ ಸೋಂಕಿತರು ಆಸ್ಪತ್ರೆಗೆ ದಾಖಲಾಗುತ್ತಿದ್ದರು. ಜೂನ್ ಅಂತ್ಯಕ್ಕೆ ಈ ಸಂಖ್ಯೆ ಎರಡಂಕಿಗೆ ಕುಸಿದಿದೆ. ಈ ಕುಸಿತದ ಹಿಂದೆ ಅಂಗನವಾಡಿ–ಆಶಾ ಕಾರ್ಯಕರ್ತರ ಸೇವೆಯಿದೆ.</p>.<p>54 ಹಾಡಿಗಳನ್ನು ಹೊಂದಿರುವ ತಾಲ್ಲೂಕಿನಲ್ಲಿ ಅಂಗನವಾಡಿ ಕಾರ್ಯ ಕರ್ತರು ಗಿರಿಜನರಿಗೆ ಕೋವಿಡ್ ಲಸಿಕೆ ಜಾಗೃತಿ ಮತ್ತು ಮನ ಪರಿವರ್ತನೆಗಾಗಿ ಪಟ್ಟ ಪರಿಶ್ರಮ ಅನನ್ಯ.</p>.<p>‘ಕೋವಿಡ್ ಆರಂಭದಿಂದಲೂ ಜಾಗೃತಿ ಕಾರ್ಯದಲ್ಲಿ ತೊಡಗಿದ್ದೇನೆ. ತಾನು ಇದೇ ಸಮುದಾಯಕ್ಕೆ ಸೇರಿ ದ್ದರೂ, ಲಸಿಕೆ ಎಂದೊಡನೆ ಜಗಳಕ್ಕೆ ಬರುವರು. ಈ ಸಂಕಷ್ಟದಲ್ಲೂ 20 ಜನರಿಗೆ ಲಸಿಕೆ ಹಾಕಿಸಿದ ತೃಪ್ತಿ ಇದೆ’ ಎನ್ನುತ್ತಾರೆ ಬಿ.ಆರ್.ಕಾವಲ್ ಹಾಡಿ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆ ಸಣ್ಣಮ್ಮ.</p>.<p>‘ಗಿರಿಜನರ ಸಹವಾಸವೇ ಬೇಡ. ಆರಂಭದಲ್ಲಿ ಲಸಿಕೆ ಕುರಿತಂತೆ ಹರ ಡಿದ ತಪ್ಪು ಮಾಹಿತಿಯಿಂದಾಗಿ ಎಷ್ಟೇ ತಿಳಿವಳಿಕೆ ಹೇಳಿದರೂ ಬದಲಾ ವಣೆಯಾಗುತ್ತಿಲ್ಲ’ ಎಂದುನೇರಳಕುಪ್ಪೆ ಎ, ಬಿ ಹಾಡಿಯ ಆಶಾ ಕಾರ್ಯಕರ್ತೆ ನೇತ್ರಾವತಿ ತಿಳಿಸಿ ದರು.</p>.<p><strong>ತಗ್ಗಿದ ಸೋಂಕು: </strong>ತಾಲ್ಲೂಕು ಕೋವಿಡ್ ವಾರ್ ರೂಂ ಅಂಕಿ–ಅಂಶದ ಮಾಹಿತಿಯಂತೆ ಮೇ ಅಂತ್ಯದಲ್ಲಿ ನಿತ್ಯವೂ 100ಕ್ಕೂ ಹೆಚ್ಚು ಸೋಂಕಿತರು ಪತ್ತೆ ಆಗುತ್ತಿದ್ದರು. ಇದೀಗ ಈ ಸಂಖ್ಯೆ 50ರೊಳಕ್ಕೆ ಬಂದಿದೆ. ಏಪ್ರಿಲ್ನಿಂದ ಜೂನ್ 20ರವರೆಗೆ 6349 ಜನರಿಗೆ ಸೋಂಕು ದೃಢಪಟ್ಟಿದ್ದು, ಇದರಲ್ಲಿ 5883 ಜನರು ಗುಣಮುಖರಾಗಿದ್ದಾರೆ ಎಂದು ತಹಶೀಲ್ದಾರ್ ಐ.ಇ.ಬಸವರಾಜ್ ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸೂರು: </strong>ತಾಲ್ಲೂಕಿನಲ್ಲಿ ಕೋವಿಡ್ ಇಳಿಮುಖವಾಗುತ್ತಿದೆ. ಮೇ ತಿಂಗಳಲ್ಲಿ ನಿತ್ಯವೂ ಸರಾಸರಿ 200ರ ಆಸುಪಾಸಿನಲ್ಲಿ ಸೋಂಕಿತರು ಆಸ್ಪತ್ರೆಗೆ ದಾಖಲಾಗುತ್ತಿದ್ದರು. ಜೂನ್ ಅಂತ್ಯಕ್ಕೆ ಈ ಸಂಖ್ಯೆ ಎರಡಂಕಿಗೆ ಕುಸಿದಿದೆ. ಈ ಕುಸಿತದ ಹಿಂದೆ ಅಂಗನವಾಡಿ–ಆಶಾ ಕಾರ್ಯಕರ್ತರ ಸೇವೆಯಿದೆ.</p>.<p>54 ಹಾಡಿಗಳನ್ನು ಹೊಂದಿರುವ ತಾಲ್ಲೂಕಿನಲ್ಲಿ ಅಂಗನವಾಡಿ ಕಾರ್ಯ ಕರ್ತರು ಗಿರಿಜನರಿಗೆ ಕೋವಿಡ್ ಲಸಿಕೆ ಜಾಗೃತಿ ಮತ್ತು ಮನ ಪರಿವರ್ತನೆಗಾಗಿ ಪಟ್ಟ ಪರಿಶ್ರಮ ಅನನ್ಯ.</p>.<p>‘ಕೋವಿಡ್ ಆರಂಭದಿಂದಲೂ ಜಾಗೃತಿ ಕಾರ್ಯದಲ್ಲಿ ತೊಡಗಿದ್ದೇನೆ. ತಾನು ಇದೇ ಸಮುದಾಯಕ್ಕೆ ಸೇರಿ ದ್ದರೂ, ಲಸಿಕೆ ಎಂದೊಡನೆ ಜಗಳಕ್ಕೆ ಬರುವರು. ಈ ಸಂಕಷ್ಟದಲ್ಲೂ 20 ಜನರಿಗೆ ಲಸಿಕೆ ಹಾಕಿಸಿದ ತೃಪ್ತಿ ಇದೆ’ ಎನ್ನುತ್ತಾರೆ ಬಿ.ಆರ್.ಕಾವಲ್ ಹಾಡಿ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆ ಸಣ್ಣಮ್ಮ.</p>.<p>‘ಗಿರಿಜನರ ಸಹವಾಸವೇ ಬೇಡ. ಆರಂಭದಲ್ಲಿ ಲಸಿಕೆ ಕುರಿತಂತೆ ಹರ ಡಿದ ತಪ್ಪು ಮಾಹಿತಿಯಿಂದಾಗಿ ಎಷ್ಟೇ ತಿಳಿವಳಿಕೆ ಹೇಳಿದರೂ ಬದಲಾ ವಣೆಯಾಗುತ್ತಿಲ್ಲ’ ಎಂದುನೇರಳಕುಪ್ಪೆ ಎ, ಬಿ ಹಾಡಿಯ ಆಶಾ ಕಾರ್ಯಕರ್ತೆ ನೇತ್ರಾವತಿ ತಿಳಿಸಿ ದರು.</p>.<p><strong>ತಗ್ಗಿದ ಸೋಂಕು: </strong>ತಾಲ್ಲೂಕು ಕೋವಿಡ್ ವಾರ್ ರೂಂ ಅಂಕಿ–ಅಂಶದ ಮಾಹಿತಿಯಂತೆ ಮೇ ಅಂತ್ಯದಲ್ಲಿ ನಿತ್ಯವೂ 100ಕ್ಕೂ ಹೆಚ್ಚು ಸೋಂಕಿತರು ಪತ್ತೆ ಆಗುತ್ತಿದ್ದರು. ಇದೀಗ ಈ ಸಂಖ್ಯೆ 50ರೊಳಕ್ಕೆ ಬಂದಿದೆ. ಏಪ್ರಿಲ್ನಿಂದ ಜೂನ್ 20ರವರೆಗೆ 6349 ಜನರಿಗೆ ಸೋಂಕು ದೃಢಪಟ್ಟಿದ್ದು, ಇದರಲ್ಲಿ 5883 ಜನರು ಗುಣಮುಖರಾಗಿದ್ದಾರೆ ಎಂದು ತಹಶೀಲ್ದಾರ್ ಐ.ಇ.ಬಸವರಾಜ್ ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>