<p><strong>ನಂಜನಗೂಡು</strong>: ನಗರದ ಶ್ರೀಕಂಠೇಶ್ವರ ದೇವಾಲಯದ ಬಳಿ ಕಳೆದ ಶುಕ್ರವಾರ ಭಿಕ್ಷುಕಿಯ ಮೂರು ವರ್ಷದ ಹೆಣ್ಣು ಮಗುವನ್ನು ಅಪಹರಿಸಿದ್ದ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿದ್ದು, ಮಗುವನ್ನು ರಕ್ಷಿಸಿದ್ದಾರೆ.</p>.<p>ಸಿಪಿಐ ಲಕ್ಷ್ಮಿಕಾಂತ್ ತಳವಾರ್ ಮಾರ್ಗದರ್ಶನದಲ್ಲಿ ನಗರ ಪೊಲೀಸ್ ಠಾಣೆಯ ಪಿಎಸ್ಐ ರವಿಕುಮಾರ್ ಮೂರು ತಂಡ ರಚಿಸಿ, ಮಗುವಿನ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದರು.</p>.<p>ಖಚಿತ ಮಾಹಿತಿಯಂತೆ ಅಪಹರಣ ಮಾಡಿದ್ದ ಆರೋಪಿ ಎಚ್.ಡಿ.ಕೋಟೆ ತಾಲ್ಲೂಕಿನ ಹುಣಸೇಕುಪ್ಪೆ ಗ್ರಾಮದ ಗಂಗಾ (45) ಎಂಬಾತನನ್ನು ಭಾನುವಾರ ಬಂಧಿಸಿ, ವಿಚಾರಿಸಿದಾಗ ಹೆಣ್ಣು ಮಗುವನ್ನು ನೀಡಿದ್ದಾನೆ. ಮಗುವನ್ನು ಮೈಸೂರಿನ ಬಾಲಮಂದಿರಕ್ಕೆ ಸೇರಿಸಿದ ಪೊಲೀಸರು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.</p>.<p class="Subhead">ಘಟನೆ ಹಿನ್ನೆಲೆ: ದೇವಾಲಯದ ಬಳಿ ಮಗಳೊಂದಿಗೆ ಪಾರ್ವತಿ ಭಿಕ್ಷೆ ಬೇಡುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಮಗುವಿನ ಕೈಗೆ ₹ 10 ನೀಡಿ, ಟೀ ಕುಡಿಸಿ ಮಗುವನ್ನು ಸಾಕಲು ನೀಡುವೆಯಾ ಎಂದು ಕೇಳಿದ್ದನು. ಇದರಿಂದ ಭಯಗೊಂಡ ಭಿಕ್ಷುಕಿ ಓಡಿ ಹೋಗಿ ರಥದ ಗಾಲಿ ಬಳಿ ಮಲಗಿದ್ದಳು. ಎಚ್ಚರವಾದಾಗ ಮಗು ಬಳಿ ಇರಲಿಲ್ಲ. ಆಗ ಅವಳು ನನ್ನ ಮಗಳನ್ನು ಅಪಹರಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಳು.</p>.<p class="Subhead">ಬಾಲಮಂದಿರ ಸೇರಿದಎರಡೂ ಮಕ್ಕಳು: 2016ರಲ್ಲಿ ಪಾರ್ವತಿಯ 2 ವರ್ಷದ ಗಂಡು ಮಗುವನ್ನು ಅಪಹರಿಸಿ ಮಾರಾಟ ಮಾಡಲಾಗಿತ್ತು. ಆಗ ತನಿಖೆ ನಡೆಸಿದ ಪೊಲೀಸರು ಮಕ್ಕಳ ಕಳ್ಳರ ಜಾಲವನ್ನು ಭೇದಿಸಿ, ಬಾಲಕನನ್ನು ರಕ್ಷಿಸಿ ಮೈಸೂರಿನ ಬಾಲ ಮಂದಿರದಲ್ಲಿ ಇರಿಸಿದ್ದರು. ಮಗಳನ್ನು ರಕ್ಷಿಸಿ ಬಾಲಮಂದಿರಕ್ಕೆ ಸೇರಿಸಿದ್ದರಿಂದ ಎರಡೂ ಮಕ್ಕಳು ಬಾಲ ಮಂದಿರ ಸೇರಿದಂತಾಗಿದೆ.</p>.<p>ಕಾರ್ಯಾಚರಣೆಯಲ್ಲಿದ್ದ ನಗರ ಪೊಲೀಸ್ ಠಾಣೆಯ ಅಜಯ್, ಸುನೀಲ್ ಕುಮಾರ್, ಕೃಷ್ಣ, ಪ್ರಕಾಶ್, ನಳಿನಾಕ್ಷಿ, ಪವಿತ್ರಾ, ನವೀನ್ ಹಾಗೂ ನಾಗೇಂದ್ರ ಅವರ ಕಾರ್ಯವನ್ನು ಸಿ.ಪಿ.ಐ. ಲಕ್ಷ್ಮಿಕಾಂತ್ ತಳವಾರ್ ಶ್ಲಾಘಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಂಜನಗೂಡು</strong>: ನಗರದ ಶ್ರೀಕಂಠೇಶ್ವರ ದೇವಾಲಯದ ಬಳಿ ಕಳೆದ ಶುಕ್ರವಾರ ಭಿಕ್ಷುಕಿಯ ಮೂರು ವರ್ಷದ ಹೆಣ್ಣು ಮಗುವನ್ನು ಅಪಹರಿಸಿದ್ದ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿದ್ದು, ಮಗುವನ್ನು ರಕ್ಷಿಸಿದ್ದಾರೆ.</p>.<p>ಸಿಪಿಐ ಲಕ್ಷ್ಮಿಕಾಂತ್ ತಳವಾರ್ ಮಾರ್ಗದರ್ಶನದಲ್ಲಿ ನಗರ ಪೊಲೀಸ್ ಠಾಣೆಯ ಪಿಎಸ್ಐ ರವಿಕುಮಾರ್ ಮೂರು ತಂಡ ರಚಿಸಿ, ಮಗುವಿನ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದರು.</p>.<p>ಖಚಿತ ಮಾಹಿತಿಯಂತೆ ಅಪಹರಣ ಮಾಡಿದ್ದ ಆರೋಪಿ ಎಚ್.ಡಿ.ಕೋಟೆ ತಾಲ್ಲೂಕಿನ ಹುಣಸೇಕುಪ್ಪೆ ಗ್ರಾಮದ ಗಂಗಾ (45) ಎಂಬಾತನನ್ನು ಭಾನುವಾರ ಬಂಧಿಸಿ, ವಿಚಾರಿಸಿದಾಗ ಹೆಣ್ಣು ಮಗುವನ್ನು ನೀಡಿದ್ದಾನೆ. ಮಗುವನ್ನು ಮೈಸೂರಿನ ಬಾಲಮಂದಿರಕ್ಕೆ ಸೇರಿಸಿದ ಪೊಲೀಸರು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.</p>.<p class="Subhead">ಘಟನೆ ಹಿನ್ನೆಲೆ: ದೇವಾಲಯದ ಬಳಿ ಮಗಳೊಂದಿಗೆ ಪಾರ್ವತಿ ಭಿಕ್ಷೆ ಬೇಡುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಮಗುವಿನ ಕೈಗೆ ₹ 10 ನೀಡಿ, ಟೀ ಕುಡಿಸಿ ಮಗುವನ್ನು ಸಾಕಲು ನೀಡುವೆಯಾ ಎಂದು ಕೇಳಿದ್ದನು. ಇದರಿಂದ ಭಯಗೊಂಡ ಭಿಕ್ಷುಕಿ ಓಡಿ ಹೋಗಿ ರಥದ ಗಾಲಿ ಬಳಿ ಮಲಗಿದ್ದಳು. ಎಚ್ಚರವಾದಾಗ ಮಗು ಬಳಿ ಇರಲಿಲ್ಲ. ಆಗ ಅವಳು ನನ್ನ ಮಗಳನ್ನು ಅಪಹರಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಳು.</p>.<p class="Subhead">ಬಾಲಮಂದಿರ ಸೇರಿದಎರಡೂ ಮಕ್ಕಳು: 2016ರಲ್ಲಿ ಪಾರ್ವತಿಯ 2 ವರ್ಷದ ಗಂಡು ಮಗುವನ್ನು ಅಪಹರಿಸಿ ಮಾರಾಟ ಮಾಡಲಾಗಿತ್ತು. ಆಗ ತನಿಖೆ ನಡೆಸಿದ ಪೊಲೀಸರು ಮಕ್ಕಳ ಕಳ್ಳರ ಜಾಲವನ್ನು ಭೇದಿಸಿ, ಬಾಲಕನನ್ನು ರಕ್ಷಿಸಿ ಮೈಸೂರಿನ ಬಾಲ ಮಂದಿರದಲ್ಲಿ ಇರಿಸಿದ್ದರು. ಮಗಳನ್ನು ರಕ್ಷಿಸಿ ಬಾಲಮಂದಿರಕ್ಕೆ ಸೇರಿಸಿದ್ದರಿಂದ ಎರಡೂ ಮಕ್ಕಳು ಬಾಲ ಮಂದಿರ ಸೇರಿದಂತಾಗಿದೆ.</p>.<p>ಕಾರ್ಯಾಚರಣೆಯಲ್ಲಿದ್ದ ನಗರ ಪೊಲೀಸ್ ಠಾಣೆಯ ಅಜಯ್, ಸುನೀಲ್ ಕುಮಾರ್, ಕೃಷ್ಣ, ಪ್ರಕಾಶ್, ನಳಿನಾಕ್ಷಿ, ಪವಿತ್ರಾ, ನವೀನ್ ಹಾಗೂ ನಾಗೇಂದ್ರ ಅವರ ಕಾರ್ಯವನ್ನು ಸಿ.ಪಿ.ಐ. ಲಕ್ಷ್ಮಿಕಾಂತ್ ತಳವಾರ್ ಶ್ಲಾಘಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>