ಸಾಮಾನ್ಯ ಜನರ ಪ್ರಜ್ಞಾಪೂರ್ವಕ ನಡೆಯಿಂದ ಮಾತ್ರ ಕೋವಿಡ್–19 ವಿರುದ್ಧ ಗೆಲ್ಲಬಹುದಾಗಿದೆ. ಮೊದಲ ಅಲೆ ಹೊಸತಾದರೂ ಇಷ್ಟೊಂದು ಭಯ ಹುಟ್ಟಿಸಿರಲಿಲ್ಲ. ಎರಡನೇ ಅಲೆಯಲ್ಲಿ ಮಧ್ಯ ವಯಸ್ಕರು, ಯುವ ಸಮೂಹ ಪ್ರಾಣ ಕಳೆದುಕೊಳ್ಳುತ್ತಿರುವುದನ್ನು ನಿತ್ಯವೂ ನನ್ನ ಕಣ್ಣುಗಳಿಂದಲೇ ನೋಡುತ್ತಿರುವುದಕ್ಕೆ ಈ ಮಾತುಗಳನ್ನು ಹೇಳುತ್ತಿರುವೆ. ಮೃತರ ಕುಟುಂಬದವರ ಆಕ್ರಂದನ ಕೇಳಲಾಗುತ್ತಿಲ್ಲ.