ಮೈಸೂರು: ‘ಮುಖ್ಯಮಂತ್ರಿ ಆಗುವವರೆಗೂ ಬಿ.ಎಸ್.ಯಡಿಯೂರಪ್ಪ ಅವರಿಗೆ ನನ್ನ ಅಗತ್ಯ ಇತ್ತು. ಈಗ ಅವರು ಆರಾಮವಾಗಿರುವುದರಿಂದ ನನ್ನೊಂದಿಗೆ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಿಲ್ಲ. ಮುಂದೆ ಅವರನ್ನು ನೋಡಿಕೊಳ್ಳುತ್ತೇವೆ’ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ತಿಳಿಸಿದರು.
ಹಳೆಯ ಮೈಸೂರು ಭಾಗಕ್ಕೆ ಸಚಿವ ಸ್ಥಾನ ಬೇಕು ಎನ್ನುವ ಕೂಗಿದೆ. ಹಾಗೆ ನೋಡಿದರೆ, ಬಹುತೇಕ ಮಂದಿ ಈ ಭಾಗದವರೇ ಸಚಿವರಾಗಿದ್ದಾರೆ. ಇನ್ನೆಷ್ಟು ಮಂದಿಯನ್ನು ಗುಡ್ಡೆ ಹಾಕುತ್ತೀರಿ ಎಂದು ಪ್ರಶ್ನಿಸಿದರು.
ಚುನಾವಣೆಯಲ್ಲಿ ಸ್ಪರ್ಧಿಸಲು ಇಷ್ಟ ಇರಲಿಲ್ಲ. ಈಗಲೂ ಸಚಿವನಾಗಲು ಬಯಸುವುದಿಲ್ಲ. ಸಚಿವ ಸ್ಥಾನ ನೀಡಬೇಕು ಎನ್ನುವ ಅಳಿಯ ಶಾಸಕ ಹರ್ಷವರ್ಧನ್ ಹೇಳಿಕೆ ಕುರಿತು ಏನನ್ನೂ ಹೇಳುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
‘ನನ್ನ ಸಾಧನೆ ಏನು ಎಂದು ಕೇಳುವ ಕಾಂಗ್ರೆಸ್ ಮುಖಂಡ ಧ್ರುವನಾರಾಯಣ ನನ್ನ ಉಗುರಿಗೆ ಸಮಾನ. 2 ಬಾರಿ ಸಂಸದರಾಗಿದ್ದವರು ಬಾಲಿಶ ಹೇಳಿಕೆ ನೀಡಬಾರದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.