ಮೈಸೂರು: ಇಲ್ಲಿನ ಕೆ.ಆರ್.ನಗರ ತಾಲ್ಲೂಕಿನ ಲಾಲನಹಳ್ಳಿಯಲ್ಲಿ ‘ಲಾಕ್ಡೌನ್’ ಆದೇಶ ಉಲ್ಲಂಘಿಸಿ ಕ್ರಿಕೆಟ್ ಆಡುತ್ತಿದ್ದ ಯುವಕರನ್ನು ಬಸ್ಕಿ ಹೊಡೆಸಿದ ಪೊಲೀಸರು ಬ್ಯಾಟ್ ಹಿಡಿದು ಎಚ್ಚರಿಕೆ ನೀಡಿದ್ದಾರೆ.
ಪದೇ ಪದೇ ಎಚ್ಚರಿಕೆ ನೀಡಿದರೂ ಕೇಳದೇ ಯುವಕರು ಕ್ರಿಕೆಟ್ ಆಡುತ್ತಿದ್ದರು. ಇದರಿಂದ ಕೋಪಗೊಂಡ ಪೊಲೀಸರು ಎಲ್ಲರನ್ನೂ ಹಿಡಿದು ಬಸ್ಕಿ ಹೊಡೆಸಿದರು. ಕಿವಿ ಹಿಡಿದು ನಿಲ್ಲಿಸಿದರು. ಮತ್ತೆ ಹೀಗೆ ಮಾಡಿದರೆ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದರು.