ಉಪಚುನಾವಣೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಕುರಿತು ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಸಿದ್ದರಾಮಯ್ಯ ಅವರ ಬಗ್ಗೆ ಇರುವ ದ್ವೇಷ, ಸಂಕಷ್ಟವನ್ನು ವಿವಿಧ ಸ್ವರೂಪಗಳಲ್ಲಿ ಶಿವಕುಮಾರ್ ತೋಡಿಕೊಳ್ಳುತ್ತಿದ್ದಾರೆ. ಸದನದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಪಾದನೆ ಮಾಡಿದಾಗ ಅದನ್ನು ನಂಬುವುದಿಲ್ಲವೆಂದು ಅವರದೇ ಪಕ್ಷದ ಅಧ್ಯಕ್ಷ ಶಿವಕುಮಾರ್ ಹೇಳಿದ್ದರು. ಒಂದೇ ಪಕ್ಷದಲ್ಲಿ ಇಷ್ಟೊಂದು ದ್ವೇಷ ಇರಬಾರದು’ ಎಂದರು.