<p><strong>ಮೈಸೂರು: </strong>ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ ಕ್ಷೇತ್ರಗಳ ಗ್ರಾಮಗಳಲ್ಲಿನ ಕುಡಿಯುವ ನೀರಿನ ಸಮಸ್ಯೆಗಳನ್ನು ಬಗೆಹರಿಸಲು ನದಿಮೂಲದಿಂದ ನೀರು ಪೂರೈಸುವ ಯೋಜನೆಗಳಿಗೆ ಒಂದು ವಾರದಲ್ಲಿ ಪ್ರಸ್ತಾವ ಸಲ್ಲಿಸಬೇಕು ಎಂದು ಸಂಸದ ಪ್ರತಾಪಸಿಂಹ ಜಿಲ್ಲಾ ಪಂಚಾಯಿತಿ ಹಾಗೂ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳಿಗೆ ಮಂಗಳವಾರ ಸೂಚಿಸಿದರು.</p>.<p>ಕೇಂದ್ರ ಸರ್ಕಾರದ ‘ಜಲಜೀವನ್ ಮಿಷನ್’ ಯೋಜನೆಯಡಿ ಜಲಮಂಡಳಿ ಹಾಗೂ ಜಿಲ್ಲಾ ಪಂಚಾಯಿತಿಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳೊಂದಿಗೆ ಅವರು ಜಿಲ್ಲಾ ಪಂಚಾಯಿತಿಯಲ್ಲಿ ಸಮನ್ವಯ ಸಭೆ ನಡೆಸಿದರು.</p>.<p>ಪಿರಿಯಾಪಟ್ಟಣದ ಹಾಡ್ಯದಿಂದ ನೀರನ್ನು ಪಟ್ಟಣದವರೆಗೂ ತರಬಹುದು. ಕನಿಷ್ಠ ಎಂದರೂ ನಿತ್ಯ 11 ಎಂಎಲ್ಡಿ ನೀರು ಸರಬರಾಜು ಆಗುವಂತೆ ಸೂಕ್ತವಾದ ಪ್ರಸ್ತಾಪ ತಯಾರಿಸಿ ಎಂದು ಅವರು ಹೇಳಿದರು.</p>.<p>ಇದೇ ಯೋಜನೆಯಡಿಯ ಪೈಪ್ಲೈನ್ ಅಕ್ಕಪಕ್ಕ ಬರುವ ಸುಮಾರು 59 ಗ್ರಾಮಗಳಿಗೂ ನೀರು ತಲುಪಿಸಬಹುದು ಎಂದು ಜಿಲ್ಲಾ ಪಂಚಾಯಿತಿಯ ಅಧಿಕಾರಿಗಳು ಸಲಹೆ ನೀಡಿದರು. ಈ ಸಲಹೆಯನ್ನು ಪುರಸ್ಕರಿಸಿದ ಪ್ರತಾಪಸಿಂಹ ಎರಡೂ ವಿಭಾಗದ ಎಂಜಿನಿಯರ್ಗಳು ಸೂಕ್ತವಾದ ಪ್ರಸ್ತಾವ ಸಲ್ಲಿಸಬೇಕು ಎಂದು ತಿಳಿಸಿದರು.</p>.<p>ಪಿರಿಯಾಪಟ್ಟಣದ ಮುತ್ತಿನಮುಳಸೋಗೆ ಗ್ರಾಮದಿಂದ ತಾಲ್ಲೂಕಿನ ಇನ್ನುಳಿದ 224 ಗ್ರಾಮಗಳಿಗೆ ನೀರು ಪೂರೈಸುವ ₹ 200 ಕೋಟಿ ಮೊತ್ತದ ಯೋಜನೆಯ ಪ್ರಸ್ತಾವವನ್ನು ಅಧಿಕಾರಿಗಳು ಸಭೆಯ ಮುಂದಿಟ್ಟರು. ಇದನ್ನೂ ಸರ್ಕಾರದೊಂದಿಗೆ ಮಾತನಾಡಿ ಹಣ ಮಂಜೂರು ಮಾಡಿಸಿಕೊಡುವುದಾಗಿ ಪ್ರತಾಪಸಿಂಹ ಭರವಸೆ ನೀಡಿದರು.</p>.<p>ಮೈಸೂರು ತಾಲ್ಲೂಕಿನ ಇಲವಾಲ ಹೋಬಳಿಯ 51 ಗ್ರಾಮಗಳಿಗೆ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಮೇಲ್ದರ್ಜೆಗೆ ಏರಿಸಿದರೆ ಹೆಚ್ಚುವರಿಯಾಗಿ 20 ಗ್ರಾಮಗಳಿಗೆ ನೀರು ಪೂರೈಕೆ ಮಾಡಬಹುದು ಎಂದು ಸಲಹೆ ನೀಡಿದರು.</p>.<p>ಹಳೇಉಂಡವಾಡಿ ಯೋಜನೆಯು ಭೂಸ್ವಾಧೀನ ಹಂತದಲ್ಲಿದ್ದು, ತಾಂತ್ರಿಕ ಬಿಡ್ನ್ನು ತೆರೆಯಲಾಗಿದೆ. ಇದರಲ್ಲಿ ಆಯ್ಕೆಯಾದವರಿಗೆ ಹಣಕಾಸಿನ ಟೆಂಡರ್ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.</p>.<p>ಬೆಳಗೊಳ– ಮೇಳಾಪುರ ಪಂಪಿಂಗ್ ಸ್ಟೇಷನ್ನ ಮೋಟಾರ್ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, ಅದರ ತಾಂತ್ರಿಕ ದೋಷವನ್ನು ಸರಿಪಡಿಸಲು ಕಂಪನಿಯಿಂದ ಅಧಿಕಾರಿಗಳು ಶೀಘ್ರವೇ ಬರಲಿದ್ದಾರೆ ಎಂದು ಹೇಳಿದರು.</p>.<p>ಶುದ್ಧ ಕುಡಿಯುವ ನೀರು ಘಟಕಗಳು ಪದೇ ಪದೇ ಕೆಡುವುದು ಹಿಂದಿನ ಸರ್ಕಾರದ ಕಳಪೆ ಸಾಧನೆ. ಈ ನ್ಯೂನತೆಯನ್ನು ಸರಿಪಡಿಸಬೇಕು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ ಕ್ಷೇತ್ರಗಳ ಗ್ರಾಮಗಳಲ್ಲಿನ ಕುಡಿಯುವ ನೀರಿನ ಸಮಸ್ಯೆಗಳನ್ನು ಬಗೆಹರಿಸಲು ನದಿಮೂಲದಿಂದ ನೀರು ಪೂರೈಸುವ ಯೋಜನೆಗಳಿಗೆ ಒಂದು ವಾರದಲ್ಲಿ ಪ್ರಸ್ತಾವ ಸಲ್ಲಿಸಬೇಕು ಎಂದು ಸಂಸದ ಪ್ರತಾಪಸಿಂಹ ಜಿಲ್ಲಾ ಪಂಚಾಯಿತಿ ಹಾಗೂ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳಿಗೆ ಮಂಗಳವಾರ ಸೂಚಿಸಿದರು.</p>.<p>ಕೇಂದ್ರ ಸರ್ಕಾರದ ‘ಜಲಜೀವನ್ ಮಿಷನ್’ ಯೋಜನೆಯಡಿ ಜಲಮಂಡಳಿ ಹಾಗೂ ಜಿಲ್ಲಾ ಪಂಚಾಯಿತಿಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳೊಂದಿಗೆ ಅವರು ಜಿಲ್ಲಾ ಪಂಚಾಯಿತಿಯಲ್ಲಿ ಸಮನ್ವಯ ಸಭೆ ನಡೆಸಿದರು.</p>.<p>ಪಿರಿಯಾಪಟ್ಟಣದ ಹಾಡ್ಯದಿಂದ ನೀರನ್ನು ಪಟ್ಟಣದವರೆಗೂ ತರಬಹುದು. ಕನಿಷ್ಠ ಎಂದರೂ ನಿತ್ಯ 11 ಎಂಎಲ್ಡಿ ನೀರು ಸರಬರಾಜು ಆಗುವಂತೆ ಸೂಕ್ತವಾದ ಪ್ರಸ್ತಾಪ ತಯಾರಿಸಿ ಎಂದು ಅವರು ಹೇಳಿದರು.</p>.<p>ಇದೇ ಯೋಜನೆಯಡಿಯ ಪೈಪ್ಲೈನ್ ಅಕ್ಕಪಕ್ಕ ಬರುವ ಸುಮಾರು 59 ಗ್ರಾಮಗಳಿಗೂ ನೀರು ತಲುಪಿಸಬಹುದು ಎಂದು ಜಿಲ್ಲಾ ಪಂಚಾಯಿತಿಯ ಅಧಿಕಾರಿಗಳು ಸಲಹೆ ನೀಡಿದರು. ಈ ಸಲಹೆಯನ್ನು ಪುರಸ್ಕರಿಸಿದ ಪ್ರತಾಪಸಿಂಹ ಎರಡೂ ವಿಭಾಗದ ಎಂಜಿನಿಯರ್ಗಳು ಸೂಕ್ತವಾದ ಪ್ರಸ್ತಾವ ಸಲ್ಲಿಸಬೇಕು ಎಂದು ತಿಳಿಸಿದರು.</p>.<p>ಪಿರಿಯಾಪಟ್ಟಣದ ಮುತ್ತಿನಮುಳಸೋಗೆ ಗ್ರಾಮದಿಂದ ತಾಲ್ಲೂಕಿನ ಇನ್ನುಳಿದ 224 ಗ್ರಾಮಗಳಿಗೆ ನೀರು ಪೂರೈಸುವ ₹ 200 ಕೋಟಿ ಮೊತ್ತದ ಯೋಜನೆಯ ಪ್ರಸ್ತಾವವನ್ನು ಅಧಿಕಾರಿಗಳು ಸಭೆಯ ಮುಂದಿಟ್ಟರು. ಇದನ್ನೂ ಸರ್ಕಾರದೊಂದಿಗೆ ಮಾತನಾಡಿ ಹಣ ಮಂಜೂರು ಮಾಡಿಸಿಕೊಡುವುದಾಗಿ ಪ್ರತಾಪಸಿಂಹ ಭರವಸೆ ನೀಡಿದರು.</p>.<p>ಮೈಸೂರು ತಾಲ್ಲೂಕಿನ ಇಲವಾಲ ಹೋಬಳಿಯ 51 ಗ್ರಾಮಗಳಿಗೆ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಮೇಲ್ದರ್ಜೆಗೆ ಏರಿಸಿದರೆ ಹೆಚ್ಚುವರಿಯಾಗಿ 20 ಗ್ರಾಮಗಳಿಗೆ ನೀರು ಪೂರೈಕೆ ಮಾಡಬಹುದು ಎಂದು ಸಲಹೆ ನೀಡಿದರು.</p>.<p>ಹಳೇಉಂಡವಾಡಿ ಯೋಜನೆಯು ಭೂಸ್ವಾಧೀನ ಹಂತದಲ್ಲಿದ್ದು, ತಾಂತ್ರಿಕ ಬಿಡ್ನ್ನು ತೆರೆಯಲಾಗಿದೆ. ಇದರಲ್ಲಿ ಆಯ್ಕೆಯಾದವರಿಗೆ ಹಣಕಾಸಿನ ಟೆಂಡರ್ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.</p>.<p>ಬೆಳಗೊಳ– ಮೇಳಾಪುರ ಪಂಪಿಂಗ್ ಸ್ಟೇಷನ್ನ ಮೋಟಾರ್ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, ಅದರ ತಾಂತ್ರಿಕ ದೋಷವನ್ನು ಸರಿಪಡಿಸಲು ಕಂಪನಿಯಿಂದ ಅಧಿಕಾರಿಗಳು ಶೀಘ್ರವೇ ಬರಲಿದ್ದಾರೆ ಎಂದು ಹೇಳಿದರು.</p>.<p>ಶುದ್ಧ ಕುಡಿಯುವ ನೀರು ಘಟಕಗಳು ಪದೇ ಪದೇ ಕೆಡುವುದು ಹಿಂದಿನ ಸರ್ಕಾರದ ಕಳಪೆ ಸಾಧನೆ. ಈ ನ್ಯೂನತೆಯನ್ನು ಸರಿಪಡಿಸಬೇಕು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>