<p><strong>ಮೈಸೂರು:</strong> ತಾಲ್ಲೂಕಿನ ಜಯಪುರದ ಸಮೀಪ ಬೀಡು ಬಿಟ್ಟಿರುವ 2 ಕಾಡಾನೆಗಳನ್ನು ಕಾಡಿಗಟ್ಟಲಾಗದೇ ಅರಣ್ಯ ಇಲಾಖೆ ಸಿಬ್ಬಂದಿ ಹೈರಣಾಗಿದ್ದಾರೆ. </p>.<p>ಎಷ್ಟೇ ಪ್ರಯತ್ನಿಸಿದರೂ ಅವು ರೈತರ ತೋಟ ಮತ್ತು ಜಮೀನುಗಳತ್ತಲೇ ಬರುತ್ತಿವೆ. ಮತ್ತಷ್ಟು ಸಾಕಾನೆಗಳನ್ನು ಸ್ಥಳಕ್ಕೆ ಕರೆಸಲು ಶುಕ್ರವಾರ ನಿರ್ಧರಿಸಲಾಗಿದೆ. ಎಲ್ಲ ಕಾರ್ಯತಂತ್ರಗಳು ವಿಫಲಗೊಂಡರೆ ಆನೆಗಳ ಸೆರೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.</p>.<p>ಸದ್ಯ, ‘ಅಭಿಮನ್ಯು’ ಮತ್ತು ‘ಕೃಷ್ಣ’ ಎಂಬ ಸಾಕಾನೆಗಳು ಆನೆಗಳನ್ನು ನಿತ್ಯ ಬೆಳಿಗ್ಗೆ ಚಿಕ್ಕನಹಳ್ಳಿ ಕಾಡಿಗೆ ಓಡಿಸುತ್ತಿವೆ. ಆದರೆ, ರಾತ್ರಿ ವೇಳೆ ಮತ್ತೆ ಕಾಡಾನೆಗಳು ಹಾರೋಹಳ್ಳಿ, ಗೋಪಾಲಪುರ, ಗುಮಚಹಳ್ಳಿ, ಬೆಟ್ಟದಬೀಡು ಸೇರಿದಂತೆ ಇನ್ನಿತರ ಸುತ್ತಮುತ್ತಲ ಗ್ರಾಮಗಳ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ನಾಶಪಡಿಸುತ್ತಿವೆ.</p>.<p>ನೂರಕ್ಕೂ ಅಧಿಕ ಅರಣ್ಯ ಇಲಾಖೆ ಸಿಬ್ಬಂದಿ ವಿವಿಧ ತಂಡಗಳಾಗಿ ವಿಂಗಡನೆಯಾಗಿ ಆನೆಗಳನ್ನು ಓಡಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಮತ್ತಷ್ಟು ಸಿಬ್ಬಂದಿಯನ್ನು ಕರೆಸಲು ಚಿಂತಿಸಲಾಗಿದೆ.</p>.<p>‘ಕಳೆದ ಒಂದು ವಾರದಿಂದಲೂ ಆನೆಗಳನ್ನು ಓಡಿಸಿ ಸಾಕಾಗಿದೆ. ಎಷ್ಟೇ ಪ್ರಯತ್ನಿಸಿದರೂ ಅವು ವಾಪಸ್ ಬರುತ್ತಿವೆ. ಇವುಗಳನ್ನು ಸೆರೆ ಹಿಡಿಯದೇ ಬೇರೆ ವಿಧಿ ಇಲ್ಲ ಎಂಬಂತಾಗಿದೆ’ ಎಂದು ಹೆಸರು ಹೇಳಲಿಚ್ಛಿಸದ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಚಿಕ್ಕನಹಳ್ಳಿ ಅರಣ್ಯದಿಂದ ಇವು ನಾಗರಹೊಳೆ ಹುಲಿ ರಕ್ಷಿತಾರಣ್ಯಕ್ಕೆ ಹೋಗಬೇಕಿದೆ. ಆದರೆ, ದಾರಿತಪ್ಪಿದಂತೆ ಕಾಣುವ ಈ ಆನೆಗಳು ನಾಗರಹೊಳೆಯತ್ತ ಹೋಗದೇ ರಾತ್ರಿ ವೇಳೆ ಮತ್ತೆ ಜಯಪುರದತ್ತ ಬರುತ್ತಿವೆ. ಇದರಿಂದ ಸಿಬ್ಬಂದಿ ಬೇಸ್ತು ಬೀಳುವಂತಾಗಿದೆ.</p>.<p>ಈ ಕುರಿತು ಪ್ರತಿಕ್ರಿಯಿಸಿರುವ ಮೈಸೂರು ಸಾಮಾಜಿಕ ಅರಣ್ಯ ವಿಭಾಗದ ಡಿಸಿಎಫ್ ಡಾ.ಪ್ರಶಾಂತ್ಕುಮಾರ್, ‘ಎಷ್ಟೇ ಪ್ರಯತ್ನಿಸಿದರೂ ಆನೆಗಳು ಕಾಡಿನತ್ತ ಹೋಗುತ್ತಿಲ್ಲ. ಮತ್ತೆ 3 ಸಾಕಾನೆ ಕರೆಸಲು ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಒಟ್ಟು 5 ಸಾಕಾನೆಗಳು ಸೇರಿದರೆ ಕಾಡಾನೆಗಳು ಹೆದರಿ ನಾಗರಹೊಳೆ ಕಡೆಗೆ ಹೋಗುವ ಸಂಭವ ಇದೆ. ಈ ಕಾರ್ಯಾಚರಣೆಯೂ ವಿಫಲಗೊಂಡರೆ ಅಂತಿಮವಾಗಿ ಮಾತ್ರವೇ ಆನೆಗಳ ಸೆರೆಗೆ ಚಿಂತಿಸಲಾಗುವುದು’ ಎಂದು ಹೇಳಿದ್ದಾರೆ.</p>.<p>ಸದ್ಯ ಕಾಡಾನೆಗಳು ಬೆಟ್ಟದಬಿಡು ಸಮೀಪದ ಕೋಣನಬೆಟ್ಟದಲ್ಲಿ ಅಡಗಿವೆ. ಜಯಪುರ ಠಾಣೆಯ ಪೊಲೀಸರೂ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ತಾಲ್ಲೂಕಿನ ಜಯಪುರದ ಸಮೀಪ ಬೀಡು ಬಿಟ್ಟಿರುವ 2 ಕಾಡಾನೆಗಳನ್ನು ಕಾಡಿಗಟ್ಟಲಾಗದೇ ಅರಣ್ಯ ಇಲಾಖೆ ಸಿಬ್ಬಂದಿ ಹೈರಣಾಗಿದ್ದಾರೆ. </p>.<p>ಎಷ್ಟೇ ಪ್ರಯತ್ನಿಸಿದರೂ ಅವು ರೈತರ ತೋಟ ಮತ್ತು ಜಮೀನುಗಳತ್ತಲೇ ಬರುತ್ತಿವೆ. ಮತ್ತಷ್ಟು ಸಾಕಾನೆಗಳನ್ನು ಸ್ಥಳಕ್ಕೆ ಕರೆಸಲು ಶುಕ್ರವಾರ ನಿರ್ಧರಿಸಲಾಗಿದೆ. ಎಲ್ಲ ಕಾರ್ಯತಂತ್ರಗಳು ವಿಫಲಗೊಂಡರೆ ಆನೆಗಳ ಸೆರೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.</p>.<p>ಸದ್ಯ, ‘ಅಭಿಮನ್ಯು’ ಮತ್ತು ‘ಕೃಷ್ಣ’ ಎಂಬ ಸಾಕಾನೆಗಳು ಆನೆಗಳನ್ನು ನಿತ್ಯ ಬೆಳಿಗ್ಗೆ ಚಿಕ್ಕನಹಳ್ಳಿ ಕಾಡಿಗೆ ಓಡಿಸುತ್ತಿವೆ. ಆದರೆ, ರಾತ್ರಿ ವೇಳೆ ಮತ್ತೆ ಕಾಡಾನೆಗಳು ಹಾರೋಹಳ್ಳಿ, ಗೋಪಾಲಪುರ, ಗುಮಚಹಳ್ಳಿ, ಬೆಟ್ಟದಬೀಡು ಸೇರಿದಂತೆ ಇನ್ನಿತರ ಸುತ್ತಮುತ್ತಲ ಗ್ರಾಮಗಳ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ನಾಶಪಡಿಸುತ್ತಿವೆ.</p>.<p>ನೂರಕ್ಕೂ ಅಧಿಕ ಅರಣ್ಯ ಇಲಾಖೆ ಸಿಬ್ಬಂದಿ ವಿವಿಧ ತಂಡಗಳಾಗಿ ವಿಂಗಡನೆಯಾಗಿ ಆನೆಗಳನ್ನು ಓಡಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಮತ್ತಷ್ಟು ಸಿಬ್ಬಂದಿಯನ್ನು ಕರೆಸಲು ಚಿಂತಿಸಲಾಗಿದೆ.</p>.<p>‘ಕಳೆದ ಒಂದು ವಾರದಿಂದಲೂ ಆನೆಗಳನ್ನು ಓಡಿಸಿ ಸಾಕಾಗಿದೆ. ಎಷ್ಟೇ ಪ್ರಯತ್ನಿಸಿದರೂ ಅವು ವಾಪಸ್ ಬರುತ್ತಿವೆ. ಇವುಗಳನ್ನು ಸೆರೆ ಹಿಡಿಯದೇ ಬೇರೆ ವಿಧಿ ಇಲ್ಲ ಎಂಬಂತಾಗಿದೆ’ ಎಂದು ಹೆಸರು ಹೇಳಲಿಚ್ಛಿಸದ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಚಿಕ್ಕನಹಳ್ಳಿ ಅರಣ್ಯದಿಂದ ಇವು ನಾಗರಹೊಳೆ ಹುಲಿ ರಕ್ಷಿತಾರಣ್ಯಕ್ಕೆ ಹೋಗಬೇಕಿದೆ. ಆದರೆ, ದಾರಿತಪ್ಪಿದಂತೆ ಕಾಣುವ ಈ ಆನೆಗಳು ನಾಗರಹೊಳೆಯತ್ತ ಹೋಗದೇ ರಾತ್ರಿ ವೇಳೆ ಮತ್ತೆ ಜಯಪುರದತ್ತ ಬರುತ್ತಿವೆ. ಇದರಿಂದ ಸಿಬ್ಬಂದಿ ಬೇಸ್ತು ಬೀಳುವಂತಾಗಿದೆ.</p>.<p>ಈ ಕುರಿತು ಪ್ರತಿಕ್ರಿಯಿಸಿರುವ ಮೈಸೂರು ಸಾಮಾಜಿಕ ಅರಣ್ಯ ವಿಭಾಗದ ಡಿಸಿಎಫ್ ಡಾ.ಪ್ರಶಾಂತ್ಕುಮಾರ್, ‘ಎಷ್ಟೇ ಪ್ರಯತ್ನಿಸಿದರೂ ಆನೆಗಳು ಕಾಡಿನತ್ತ ಹೋಗುತ್ತಿಲ್ಲ. ಮತ್ತೆ 3 ಸಾಕಾನೆ ಕರೆಸಲು ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಒಟ್ಟು 5 ಸಾಕಾನೆಗಳು ಸೇರಿದರೆ ಕಾಡಾನೆಗಳು ಹೆದರಿ ನಾಗರಹೊಳೆ ಕಡೆಗೆ ಹೋಗುವ ಸಂಭವ ಇದೆ. ಈ ಕಾರ್ಯಾಚರಣೆಯೂ ವಿಫಲಗೊಂಡರೆ ಅಂತಿಮವಾಗಿ ಮಾತ್ರವೇ ಆನೆಗಳ ಸೆರೆಗೆ ಚಿಂತಿಸಲಾಗುವುದು’ ಎಂದು ಹೇಳಿದ್ದಾರೆ.</p>.<p>ಸದ್ಯ ಕಾಡಾನೆಗಳು ಬೆಟ್ಟದಬಿಡು ಸಮೀಪದ ಕೋಣನಬೆಟ್ಟದಲ್ಲಿ ಅಡಗಿವೆ. ಜಯಪುರ ಠಾಣೆಯ ಪೊಲೀಸರೂ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>