ಸದ್ಯ, ‘ಅಭಿಮನ್ಯು’ ಮತ್ತು ‘ಕೃಷ್ಣ’ ಎಂಬ ಸಾಕಾನೆಗಳು ಆನೆಗಳನ್ನು ನಿತ್ಯ ಬೆಳಿಗ್ಗೆ ಚಿಕ್ಕನಹಳ್ಳಿ ಕಾಡಿಗೆ ಓಡಿಸುತ್ತಿವೆ. ಆದರೆ, ರಾತ್ರಿ ವೇಳೆ ಮತ್ತೆ ಕಾಡಾನೆಗಳು ಹಾರೋಹಳ್ಳಿ, ಗೋಪಾಲಪುರ, ಗುಮಚಹಳ್ಳಿ, ಬೆಟ್ಟದಬೀಡು ಸೇರಿದಂತೆ ಇನ್ನಿತರ ಸುತ್ತಮುತ್ತಲ ಗ್ರಾಮಗಳ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ನಾಶಪಡಿಸುತ್ತಿವೆ.