<p><strong>ಹಂಪಾಪುರ/ಮೈಸೂರು:</strong> ಮೈಸೂರು ತಾಲ್ಲೂಕಿನ ಜಯಪುರದ ಬಳಿ ಕಾಣಿಸಿಕೊಂಡಿದ್ದ ಎರಡು ಕಾಡಾನೆಗಳು ಅಂತೂ ಇಂತೂ ಕಾಡಿಗೆ ಸೇರಿವೆ. ಇದರಿಂದ ಅರಣ್ಯ ಇಲಾಖೆ ಸಿಬ್ಬಂದಿ ನಿಟ್ಟುಸಿರು ಬಿಡುವಂತಾಗಿದೆ.</p>.<p>ಸಾಕಾನೆಗಳಾದ ಅಭಿಮನ್ಯು, ಗೋಪಾಲಸ್ವಾಮಿ, ಕೃಷ್ಣ ಹಾಗೂ ಬಲರಾಮ ಆನೆಗಳು ಯಶಸ್ವಿಯಾಗಿ ಕಾಡಾನೆಗಳನ್ನು ಚಿಕ್ಕದೇವಮ್ಮ ಬೆಟ್ಟದ ಅರಣ್ಯ ಪ್ರದೇಶಕ್ಕೆ ಸೇರಿಸಿವೆ. ಇವು ವಾಪಸ್ ಬರುವುದಿಲ್ಲ, ಮುಂದೆ ಬಂಡೀಪುರ ಹುಲಿ ರಕ್ಷಿತಾರಣ್ಯವನ್ನು ಸೇರಬಹುದು ಎಂಬ ಲೆಕ್ಕಾಚಾರ ಅರಣ್ಯ ಇಲಾಖೆ ಸಿಬ್ಬಂದಿಯದು.</p>.<p>ಕಳೆದೊಂದು ವಾರದಿಂದ ಈ ಆನೆಗಳು ಜಯಪುರ ಹೋಬಳಿಯ ಹಲವು ಗ್ರಾಮಗಳಲ್ಲಿ ಕಾಣಿಸಿಕೊಂಡು ಬೆಳೆ ನಾಶ ಮಾಡಿದ್ದವು. ನಂತರ, ಇವುಗಳನ್ನು ಕಾಡಿಗೆ ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಇನ್ನಿಲ್ಲದ ಕಸರತ್ತು ನಡೆಸಿದ್ದರು. ಯಾದಗಿರಿಯ ಕೂಲಿಕಾರ್ಮಿಕ ಹನುಮಂತರಾಯ ಅವರನ್ನು ಈ ಆನೆಗಳೇ ತುಳಿದು ಸಾಯಿಸಿ ಆತಂಕ ಮೂಡಿಸಿದ್ದವು. ಇದರಿಂದ ಆನೆಗಳನ್ನು ಸೆರೆ ಹಿಡಿಯದೇ ಬೇರೆ ವಿಧಿ ಇಲ್ಲ ಎಂಬ ವಾತಾವರಣ ಸೃಷ್ಟಿಯಾಗಿತ್ತು.</p>.<p>ಶನಿವಾರ ಬೆಳಿಗ್ಗೆಯಿಂದಲೇ ನಡೆಸಿದ ಸತತ ಕಾರ್ಯಾಚರಣೆ ಕೊನೆಗೂ ಫಲ ಕೊಟ್ಟಿತು. ಕಬಿನಿ ನದಿಯನ್ನು ದಾಟಿದ ಈ ಆನೆಗಳು ಚಿಕ್ಕದೇವಮ್ಮ ಬೆಟ್ಟದಲ್ಲಿ ಸದ್ಯ ತಂಗಿವೆ. ಇಲ್ಲಿಗೆ ಸಮಿಪದ ಬಂಡೀಪುರದ ಅರಣ್ಯದತ್ತ ಇವುಗಳು ಹೊರಡಲಿವೆ ಎಂದು ಡಿಸಿಎಫ್ ಡಾ.ಪ್ರಶಾಂತಕುಮಾರ್ ‘<strong>ಪ್ರಜಾವಾಣಿ</strong>’ಗೆ ತಿಳಿಸಿದರು.</p>.<p>ಕಾರ್ಯಾಚರಣೆ ತಂಡದಲ್ಲಿ ಡಿಸಿಎಫ್ ಪ್ರಶಾಂತ್ಕುಮಾರ್ ಅವರ ಜತೆ, ಎಸಿಎಫ್ ಪರಮೇಶ್ವರಪ್ಪ, ಕೃಷ್ಣಾನಿಧಿ, ಆರ್ಎಫ್ಒ ಮಧು, ನಂಜನಗೂಡು ಸಾಮಾಜಿಕ ಅರಣ್ಯ ವಲಯದ ಆರ್ಎಫ್ಒ ಲೋಕೇಶಮೂರ್ತಿ, ಎಸ್ಐ ಆನಂದ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಂಪಾಪುರ/ಮೈಸೂರು:</strong> ಮೈಸೂರು ತಾಲ್ಲೂಕಿನ ಜಯಪುರದ ಬಳಿ ಕಾಣಿಸಿಕೊಂಡಿದ್ದ ಎರಡು ಕಾಡಾನೆಗಳು ಅಂತೂ ಇಂತೂ ಕಾಡಿಗೆ ಸೇರಿವೆ. ಇದರಿಂದ ಅರಣ್ಯ ಇಲಾಖೆ ಸಿಬ್ಬಂದಿ ನಿಟ್ಟುಸಿರು ಬಿಡುವಂತಾಗಿದೆ.</p>.<p>ಸಾಕಾನೆಗಳಾದ ಅಭಿಮನ್ಯು, ಗೋಪಾಲಸ್ವಾಮಿ, ಕೃಷ್ಣ ಹಾಗೂ ಬಲರಾಮ ಆನೆಗಳು ಯಶಸ್ವಿಯಾಗಿ ಕಾಡಾನೆಗಳನ್ನು ಚಿಕ್ಕದೇವಮ್ಮ ಬೆಟ್ಟದ ಅರಣ್ಯ ಪ್ರದೇಶಕ್ಕೆ ಸೇರಿಸಿವೆ. ಇವು ವಾಪಸ್ ಬರುವುದಿಲ್ಲ, ಮುಂದೆ ಬಂಡೀಪುರ ಹುಲಿ ರಕ್ಷಿತಾರಣ್ಯವನ್ನು ಸೇರಬಹುದು ಎಂಬ ಲೆಕ್ಕಾಚಾರ ಅರಣ್ಯ ಇಲಾಖೆ ಸಿಬ್ಬಂದಿಯದು.</p>.<p>ಕಳೆದೊಂದು ವಾರದಿಂದ ಈ ಆನೆಗಳು ಜಯಪುರ ಹೋಬಳಿಯ ಹಲವು ಗ್ರಾಮಗಳಲ್ಲಿ ಕಾಣಿಸಿಕೊಂಡು ಬೆಳೆ ನಾಶ ಮಾಡಿದ್ದವು. ನಂತರ, ಇವುಗಳನ್ನು ಕಾಡಿಗೆ ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಇನ್ನಿಲ್ಲದ ಕಸರತ್ತು ನಡೆಸಿದ್ದರು. ಯಾದಗಿರಿಯ ಕೂಲಿಕಾರ್ಮಿಕ ಹನುಮಂತರಾಯ ಅವರನ್ನು ಈ ಆನೆಗಳೇ ತುಳಿದು ಸಾಯಿಸಿ ಆತಂಕ ಮೂಡಿಸಿದ್ದವು. ಇದರಿಂದ ಆನೆಗಳನ್ನು ಸೆರೆ ಹಿಡಿಯದೇ ಬೇರೆ ವಿಧಿ ಇಲ್ಲ ಎಂಬ ವಾತಾವರಣ ಸೃಷ್ಟಿಯಾಗಿತ್ತು.</p>.<p>ಶನಿವಾರ ಬೆಳಿಗ್ಗೆಯಿಂದಲೇ ನಡೆಸಿದ ಸತತ ಕಾರ್ಯಾಚರಣೆ ಕೊನೆಗೂ ಫಲ ಕೊಟ್ಟಿತು. ಕಬಿನಿ ನದಿಯನ್ನು ದಾಟಿದ ಈ ಆನೆಗಳು ಚಿಕ್ಕದೇವಮ್ಮ ಬೆಟ್ಟದಲ್ಲಿ ಸದ್ಯ ತಂಗಿವೆ. ಇಲ್ಲಿಗೆ ಸಮಿಪದ ಬಂಡೀಪುರದ ಅರಣ್ಯದತ್ತ ಇವುಗಳು ಹೊರಡಲಿವೆ ಎಂದು ಡಿಸಿಎಫ್ ಡಾ.ಪ್ರಶಾಂತಕುಮಾರ್ ‘<strong>ಪ್ರಜಾವಾಣಿ</strong>’ಗೆ ತಿಳಿಸಿದರು.</p>.<p>ಕಾರ್ಯಾಚರಣೆ ತಂಡದಲ್ಲಿ ಡಿಸಿಎಫ್ ಪ್ರಶಾಂತ್ಕುಮಾರ್ ಅವರ ಜತೆ, ಎಸಿಎಫ್ ಪರಮೇಶ್ವರಪ್ಪ, ಕೃಷ್ಣಾನಿಧಿ, ಆರ್ಎಫ್ಒ ಮಧು, ನಂಜನಗೂಡು ಸಾಮಾಜಿಕ ಅರಣ್ಯ ವಲಯದ ಆರ್ಎಫ್ಒ ಲೋಕೇಶಮೂರ್ತಿ, ಎಸ್ಐ ಆನಂದ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>