ನಂಜನಗೂಡು ತಾಲ್ಲೂಕಿನ ಕೆಂಪಿಸಿದ್ದನಹುಂಡಿ ಗ್ರಾಮದ ಎಸ್.ರವಿಕುಮಾರ್ ಎಂಬುವವರಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದಾನೆ. ಎಟಿಎಂ ಅಮಾನ್ಯವಾಗಿದ್ದು, ಅದನ್ನು ಚಾಲನೆ ಮಾಡಲು ಕಾರ್ಡ್ ಸಂಖ್ಯೆ ಹೇಳಿ ಎಂದಿದ್ದಾನೆ. ಕಾರ್ಡ್ ಸಂಖ್ಯೆ ಹೇಳಿದ ಬಳಿಕ ‘ಓಟಿಪಿ’ ಸಂಖ್ಯೆಯನ್ನೂ ಕೇಳಿದ್ದಾನೆ. ರವಿಕುಮಾರ್ ‘ಓಟಿಪಿ’ ಸಂಖ್ಯೆಯನ್ನೂ ನೀಡಿದ್ದಾರೆ. ನಂತರ, ಪರಿಶೀಲನೆ ನಡೆಸಿದಾಗ ₹ 99,998 ಖಾತೆಯಿಂದ ತೆಗೆದಿರುವುದು ಗೊತ್ತಾಗಿದೆ.