<p><strong>ಮೈಸೂರು: </strong>ಮೈಸೂರು ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಎಂಸಿಎಸ್) ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಗೆ ಶಾಸಕ ಜಿ.ಟಿ.ದೇವೇಗೌಡರ ಬೆಂಬಲಿತ13 ಸದಸ್ಯರು ಅವಿರೋಧ ಆಯ್ಕೆಯಾಗಿದ್ದಾರೆ.</p>.<p>ನ.7ರಂದು ನಿಗದಿಯಾಗಿದ್ದ ಚುನಾವಣೆಗೆ ‘ಎ’ ವರ್ಗ ದಿಂದ ಐದು ಮಂದಿ, ‘ಬಿ’ ವರ್ಗದಿಂದ ಎಂಟು ಮಂದಿ ಆಯ್ಕೆ ಆಗಬೇಕಿತ್ತು. ಅದಕ್ಕೆ ಕ್ರಮವಾಗಿ 8 ಹಾಗೂ 21 ನಾಮಪತ್ರ ಸಲ್ಲಿಕೆಯಾಗಿದ್ದವು. ‘ಎ’ ವರ್ಗದಲ್ಲಿ ಶನಿವಾರ ನಾಮಪತ್ರ ಪರಿಶೀಲನೆ ವೇಳೆ ಮೂರು ಅರ್ಜಿಗಳು ತಿರಸ್ಕತವಾಗಿದ್ದವು. ಹೀಗಾಗಿ, ಐವರು ಅವಿರೋಧ ಆಯ್ಕೆ ಯಾದರು. ‘ಬಿ’ ವರ್ಗದ 13 ಮಂದಿ ನಾಮಪತ್ರ ವಾಪಸ್ಸು ಪಡೆದಿದ್ದರಿಂದ ಎಂಟು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಐದು ವರ್ಷಗಳ ಅಧಿಕಾರಾವಧಿ ಇದಾಗಿದೆ.</p>.<p>‘ಎ’ ವರ್ಗದಿಂದ ದಾಸನಕೊಪ್ಪಲು ಹೊನ್ನಗಿರಿಗೌಡ, ಕಾಮನಕೆರೆಹುಂಡಿ ಎಚ್.ಗೋಪಾಲ್, ಹಾರೋಹಳ್ಳಿ ಎಂ.ಬಿ.ಮಂಜುನಾಥ್, ಚಿಕ್ಕಹಳ್ಳಿ ಎಂ.ಕುಮಾರ್, ಯರಗನಹಳ್ಳಿ ಅಣ್ಣಯ್ಯ, ‘ಬಿ’ ವರ್ಗದಿಂದ ಬೋಗಾದಿಯ ಚಂದ್ರಶೇಖರ್, ಕಾಮನಕೆರೆಹುಂಡಿ ಪ್ರಕಾಶ್, ಕುಂಬಾರಕೊಪ್ಪಲು ಲಲಿತಮ್ಮ, ಬೋಗಾದಿ ರುಕ್ಮಿಣಿ, ಜಟ್ಟಿಹುಂಡಿ ಯೋಗೇಶ್, ಮಾವಿನಹಳ್ಳಿ ರಾಮಕೃಷ್ಣಚಾರಿ, ಗೋಪಾಲಪುರ ಅಂದಾನಿ ಜಯಪುರ ರೇಣುಕ ಆಯ್ಕೆಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಮೈಸೂರು ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಎಂಸಿಎಸ್) ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಗೆ ಶಾಸಕ ಜಿ.ಟಿ.ದೇವೇಗೌಡರ ಬೆಂಬಲಿತ13 ಸದಸ್ಯರು ಅವಿರೋಧ ಆಯ್ಕೆಯಾಗಿದ್ದಾರೆ.</p>.<p>ನ.7ರಂದು ನಿಗದಿಯಾಗಿದ್ದ ಚುನಾವಣೆಗೆ ‘ಎ’ ವರ್ಗ ದಿಂದ ಐದು ಮಂದಿ, ‘ಬಿ’ ವರ್ಗದಿಂದ ಎಂಟು ಮಂದಿ ಆಯ್ಕೆ ಆಗಬೇಕಿತ್ತು. ಅದಕ್ಕೆ ಕ್ರಮವಾಗಿ 8 ಹಾಗೂ 21 ನಾಮಪತ್ರ ಸಲ್ಲಿಕೆಯಾಗಿದ್ದವು. ‘ಎ’ ವರ್ಗದಲ್ಲಿ ಶನಿವಾರ ನಾಮಪತ್ರ ಪರಿಶೀಲನೆ ವೇಳೆ ಮೂರು ಅರ್ಜಿಗಳು ತಿರಸ್ಕತವಾಗಿದ್ದವು. ಹೀಗಾಗಿ, ಐವರು ಅವಿರೋಧ ಆಯ್ಕೆ ಯಾದರು. ‘ಬಿ’ ವರ್ಗದ 13 ಮಂದಿ ನಾಮಪತ್ರ ವಾಪಸ್ಸು ಪಡೆದಿದ್ದರಿಂದ ಎಂಟು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಐದು ವರ್ಷಗಳ ಅಧಿಕಾರಾವಧಿ ಇದಾಗಿದೆ.</p>.<p>‘ಎ’ ವರ್ಗದಿಂದ ದಾಸನಕೊಪ್ಪಲು ಹೊನ್ನಗಿರಿಗೌಡ, ಕಾಮನಕೆರೆಹುಂಡಿ ಎಚ್.ಗೋಪಾಲ್, ಹಾರೋಹಳ್ಳಿ ಎಂ.ಬಿ.ಮಂಜುನಾಥ್, ಚಿಕ್ಕಹಳ್ಳಿ ಎಂ.ಕುಮಾರ್, ಯರಗನಹಳ್ಳಿ ಅಣ್ಣಯ್ಯ, ‘ಬಿ’ ವರ್ಗದಿಂದ ಬೋಗಾದಿಯ ಚಂದ್ರಶೇಖರ್, ಕಾಮನಕೆರೆಹುಂಡಿ ಪ್ರಕಾಶ್, ಕುಂಬಾರಕೊಪ್ಪಲು ಲಲಿತಮ್ಮ, ಬೋಗಾದಿ ರುಕ್ಮಿಣಿ, ಜಟ್ಟಿಹುಂಡಿ ಯೋಗೇಶ್, ಮಾವಿನಹಳ್ಳಿ ರಾಮಕೃಷ್ಣಚಾರಿ, ಗೋಪಾಲಪುರ ಅಂದಾನಿ ಜಯಪುರ ರೇಣುಕ ಆಯ್ಕೆಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>