<p><strong>ಮೈಸೂರು: </strong>ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ನಡೆಸಿದ 2020–21ನೇ ಸಾಲಿನ ಕಿರಿಯ ಸಂಶೋಧನಾ ಫೆಲೋಷಿಪ್ (ಜೆಆರ್ಎಫ್) ಪರೀಕ್ಷೆಯಲ್ಲಿ ಜಿಲ್ಲೆಯ ಎಸ್.ಹರ್ಷಿತಾ ನಾಯಕ್ ಉತ್ತಮ ಸಾಧನೆ ತೋರಿದ್ದಾರೆ.</p>.<p>ಸೆಪ್ಟೆಂಬರ್ನಲ್ಲಿ ನಡೆದಿದ್ದ ಅಖಿಲ ಭಾರತ ಮಟ್ಟದ ಪರೀಕ್ಷೆಯ ಫಲಿತಾಂಶ ನ.7 ರಂದು ಪ್ರಕಟವಾಗಿದೆ. ನಂಜನಗೂಡು ತಾಲ್ಲೂಕಿನ ಬೊಕ್ಕಳ್ಳಿ ಗ್ರಾಮದ ಹರ್ಷಿತಾ ಅವರಿಗೆ ಪರಿಶಿಷ್ಟ ಪಂಗಡ (ಎಸ್ಟಿ) ವಿಭಾಗದಲ್ಲಿ ಎರಡನೇ ರ್ಯಾಂಕ್ ಲಭಿಸಿದೆ.</p>.<p>ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಕಾಲೇಜಿನಲ್ಲಿ ಬಿಎಸ್ಸಿ (ಅಗ್ರಿ ಕಲ್ಚರಲ್ ಮಾರ್ಕೆಟಿಂಗ್) ಪದವಿಯನ್ನು ಡಿಸ್ಟಿಂಕ್ಷನ್ನೊಂದಿಗೆ ಪೂರೈಸಿರುವ ಅವರು ಕೃಷಿ ವಿಷಯದಲ್ಲಿ ಉನ್ನತ ಶಿಕ್ಷಣದ ಕನಸು ಹೊಂದಿದ್ದಾರೆ.</p>.<p>‘ಕಳೆದ ವರ್ಷದ ಪರೀಕ್ಷೆಯಲ್ಲಿ ನಮ್ಮ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಉತ್ತಮ ರ್ಯಾಂಕ್ ಪಡೆದುಕೊಂಡಿ ದ್ದರು. ಅವರಿಂದ ಉತ್ತೇಜನ ಪಡೆದು ನಾನೂ ಪರೀಕ್ಷೆ ಬರೆದೆ. ಕೆಟಗರಿಯಲ್ಲಿ ಎರಡನೇ ರ್ಯಾಂಕ್ ಲಭಿಸಿರುವುದು ಸಂತಸ ಉಂಟುಮಾಡಿದೆ’ ಎಂದು ಹರ್ಷಿತಾ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಪಿಜಿಸಿಇಟಿ ಪರೀಕ್ಷೆಯನ್ನೂ ಬರೆದಿದ್ದು, ಅದರ ಫಲಿತಾಂಶ ಮುಂದಿನ ಬುಧವಾರ ಪ್ರಕಟಗೊಳ್ಳುವ ಸಾಧ್ಯತೆಯಿದೆ. ಅಲ್ಲೂ ಉತ್ತಮ ರ್ಯಾಂಕ್ ಪಡೆಯುವ ನಿರೀಕ್ಷೆಯಿದೆ. ಬೆಂಗಳೂರಿನ ಜಿಕೆವಿಕೆಯಲ್ಲಿ ಶಿಕ್ಷಣ ಮುಂದುವರಿಸಲು ಬಯಸಿದ್ದೇನೆ. ಪಿಎಚ್.ಡಿ ಮಾಡುವ ಜತೆಗೆ ಯುಜಿಸಿ ‘ಎನ್ಇಟಿ’ ಪಾಸ್ ಮಾಡಬೇಕೆಂಬುದು ನನ್ನ ಗುರಿ’ ಎಂದರು.</p>.<p>ಬೊಕ್ಕಳ್ಳಿ ಗ್ರಾಮದ ಕೃಷಿಕರಾದ ಸ್ವಾಮಿನಾಯಕ ಮತ್ತು ಮೀನಾಕ್ಷಿ ದಂಪತಿಯ ಪುತ್ರಿ ಹರ್ಷಿತಾ ಅವರು ಪ್ರಾಥಮಿಕ ಶಿಕ್ಷಣವನ್ನು ನಂಜನಗೂಡಿನಲ್ಲಿ ಪಡೆದಿದ್ದಾರೆ. ಆರನೇ ತರಗತಿಯಿಂದ ಪಿಯುಸಿ ವರೆಗೆ ಮೈಸೂರಿನ ನವೋದಯ ಶಾಲೆಯಲ್ಲಿ ಕಲಿತಿದ್ದಾರೆ. ಸೋದರಮಾವ ತಗಡೂರಿನ ಗೋಪಿನಾಥ್ ಅವರು ಇವರ ಸಾಧನೆಗೆ ನೆರವಾಗಿ ನಿಂತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ನಡೆಸಿದ 2020–21ನೇ ಸಾಲಿನ ಕಿರಿಯ ಸಂಶೋಧನಾ ಫೆಲೋಷಿಪ್ (ಜೆಆರ್ಎಫ್) ಪರೀಕ್ಷೆಯಲ್ಲಿ ಜಿಲ್ಲೆಯ ಎಸ್.ಹರ್ಷಿತಾ ನಾಯಕ್ ಉತ್ತಮ ಸಾಧನೆ ತೋರಿದ್ದಾರೆ.</p>.<p>ಸೆಪ್ಟೆಂಬರ್ನಲ್ಲಿ ನಡೆದಿದ್ದ ಅಖಿಲ ಭಾರತ ಮಟ್ಟದ ಪರೀಕ್ಷೆಯ ಫಲಿತಾಂಶ ನ.7 ರಂದು ಪ್ರಕಟವಾಗಿದೆ. ನಂಜನಗೂಡು ತಾಲ್ಲೂಕಿನ ಬೊಕ್ಕಳ್ಳಿ ಗ್ರಾಮದ ಹರ್ಷಿತಾ ಅವರಿಗೆ ಪರಿಶಿಷ್ಟ ಪಂಗಡ (ಎಸ್ಟಿ) ವಿಭಾಗದಲ್ಲಿ ಎರಡನೇ ರ್ಯಾಂಕ್ ಲಭಿಸಿದೆ.</p>.<p>ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಕಾಲೇಜಿನಲ್ಲಿ ಬಿಎಸ್ಸಿ (ಅಗ್ರಿ ಕಲ್ಚರಲ್ ಮಾರ್ಕೆಟಿಂಗ್) ಪದವಿಯನ್ನು ಡಿಸ್ಟಿಂಕ್ಷನ್ನೊಂದಿಗೆ ಪೂರೈಸಿರುವ ಅವರು ಕೃಷಿ ವಿಷಯದಲ್ಲಿ ಉನ್ನತ ಶಿಕ್ಷಣದ ಕನಸು ಹೊಂದಿದ್ದಾರೆ.</p>.<p>‘ಕಳೆದ ವರ್ಷದ ಪರೀಕ್ಷೆಯಲ್ಲಿ ನಮ್ಮ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಉತ್ತಮ ರ್ಯಾಂಕ್ ಪಡೆದುಕೊಂಡಿ ದ್ದರು. ಅವರಿಂದ ಉತ್ತೇಜನ ಪಡೆದು ನಾನೂ ಪರೀಕ್ಷೆ ಬರೆದೆ. ಕೆಟಗರಿಯಲ್ಲಿ ಎರಡನೇ ರ್ಯಾಂಕ್ ಲಭಿಸಿರುವುದು ಸಂತಸ ಉಂಟುಮಾಡಿದೆ’ ಎಂದು ಹರ್ಷಿತಾ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಪಿಜಿಸಿಇಟಿ ಪರೀಕ್ಷೆಯನ್ನೂ ಬರೆದಿದ್ದು, ಅದರ ಫಲಿತಾಂಶ ಮುಂದಿನ ಬುಧವಾರ ಪ್ರಕಟಗೊಳ್ಳುವ ಸಾಧ್ಯತೆಯಿದೆ. ಅಲ್ಲೂ ಉತ್ತಮ ರ್ಯಾಂಕ್ ಪಡೆಯುವ ನಿರೀಕ್ಷೆಯಿದೆ. ಬೆಂಗಳೂರಿನ ಜಿಕೆವಿಕೆಯಲ್ಲಿ ಶಿಕ್ಷಣ ಮುಂದುವರಿಸಲು ಬಯಸಿದ್ದೇನೆ. ಪಿಎಚ್.ಡಿ ಮಾಡುವ ಜತೆಗೆ ಯುಜಿಸಿ ‘ಎನ್ಇಟಿ’ ಪಾಸ್ ಮಾಡಬೇಕೆಂಬುದು ನನ್ನ ಗುರಿ’ ಎಂದರು.</p>.<p>ಬೊಕ್ಕಳ್ಳಿ ಗ್ರಾಮದ ಕೃಷಿಕರಾದ ಸ್ವಾಮಿನಾಯಕ ಮತ್ತು ಮೀನಾಕ್ಷಿ ದಂಪತಿಯ ಪುತ್ರಿ ಹರ್ಷಿತಾ ಅವರು ಪ್ರಾಥಮಿಕ ಶಿಕ್ಷಣವನ್ನು ನಂಜನಗೂಡಿನಲ್ಲಿ ಪಡೆದಿದ್ದಾರೆ. ಆರನೇ ತರಗತಿಯಿಂದ ಪಿಯುಸಿ ವರೆಗೆ ಮೈಸೂರಿನ ನವೋದಯ ಶಾಲೆಯಲ್ಲಿ ಕಲಿತಿದ್ದಾರೆ. ಸೋದರಮಾವ ತಗಡೂರಿನ ಗೋಪಿನಾಥ್ ಅವರು ಇವರ ಸಾಧನೆಗೆ ನೆರವಾಗಿ ನಿಂತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>