ಮೈಸೂರು: ನಗರದಲ್ಲಿ ಸೋಮವಾರ ರಾತ್ರಿ ಇಡಿ ಸುರಿದ ಭಾರಿ ಮಳೆಗೆ ಸೇತುವೆಯೊಂದು ಕುಸಿದಿದ್ದರೆ, ಮರಗಳು ಬುಡಮೇಲಾಗಿವೆ.
ಇಲ್ಲಿನ ಬೋಗಾದಿಯ ನಾಗಲಿಂಗೇಶ್ವರ ದೇಗುಲದ ಹಿಂಭಾಗದ ಸೇತುವೆ ಕೊಚ್ಚಿ ಕೊಂಡು ಹೋಗಿದೆ. ಕುಕ್ಕರಹಳ್ಳಿ ಕೆರೆ ಸಮೀಪ ಮರವೊಂದು ಧರೆಗುರುಳಿವೆ. ರಾಜಕುಮಾರರಸ್ತೆ, ಮೈಮುಲ್ ಸಮೀಪದ ಬನ್ನೂರು ರಸ್ತೆಯಲ್ಲಿ ಚರಂಡಿ ಕಟ್ಟಿಕೊಂಡು ಮನೆಗಳಿಗೆ ನೀರು ನುಗ್ಗಿದೆ.