ಎಲೆತೋಟದ ಸಮೀಪದಲ್ಲಿರುವ ಹೋಟೆಲ್ವೊಂದರಲ್ಲಿ ಕಿರಣ್ ಮತ್ತು ಇವರ ಸ್ನೇಹಿತರು ಬಾಡೂಟ ಮಾಡಿ, ಪಾರ್ಟಿ ಮಾಡಿದ್ದಾರೆ. ನಂತರ ಮನೆಗೆ ಬರುವಾಗ ಎದುರಾದ ಸ್ವಾಮಿಗೂ ಇವರಿಗೂ ಮಾತಿನ ಚಕಮಕಿ ನಡೆದಿದೆ. ನಂತರ ಕಿರಣ್, ಮಧುಸೂದನ್, ದೀಪಕ್ಕಿಶನ್ ಅವರು ಸ್ಕೂಟರ್ನಲ್ಲಿ ಹೋಗುವಾಗ ಎರಡು ಬೈಕ್ನಲ್ಲಿ ಬಂದ ಸ್ವಾಮಿ, ದಿಲೀಪ್, ರಘು ಎಂಬುವವರು ಇವರ ಮೇಲೆ ಹಲ್ಲೆ ನಡೆಸಿದರು. ಕಿರಣ್, ದೀಪಕ್ಕಿಶನ್ ಸ್ಥಳದಲ್ಲೆ ಮೃತಪಟ್ಟರೆ, ಮಧುಸೂದನ್ ಗಾಯಗೊಂಡರು. ಈ ವೇಳೆ ಇಲ್ಲಿಗೆ ಬಂದ ಪೊಲೀಸ್ ಗರುಡಾ ವಾಹನವನ್ನು ಕಂಡು ಆರೋಪಿಗಳು ಪರಾರಿಯಾದರು. ಆರೋಪಿಗಳಾದ ದಿಲೀಪ್ ಮತ್ತು ಮಧು ಜಯಪುರ ಠಾಣೆಗೆ ಹೋಗಿ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.