<p><strong>ಮೈಸೂರು</strong>: ಇಲ್ಲಿನ ಕೆ.ಆರ್. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿದ್ಯಾರಣ್ಯಪುರಂನ ಬಹಳಷ್ಟು ರಸ್ತೆಗಳು ಸುಸ್ಥಿತಿಯಲ್ಲಿದ್ದರೂ, ಕೆಲ ರಸ್ತೆಗಳು ಇನ್ನೂ ದುರಾವಸ್ಥೆಯಲ್ಲೇ ಇವೆ.</p>.<p>ಪಾಲಿಕೆಯ 61ನೇ ವಾರ್ಡಿನ ವಿದ್ಯಾರಣ್ಯಪುರಂ 4ನೇ ಮೇನ್ನ ರಸ್ತೆ ಅಕ್ಷರಶಃ ಹಾಳಾಗಿದೆ. ಕಲ್ಲುಗಳು ಮುಳ್ಳುಗಳಂತೆ ಪುಟಿದೆದ್ದಿದ್ದು, ವಾಹನ ಸವಾರರು ಇಲ್ಲಿ ಹಾದು ಹೋಗುವಾಗ ಹೈರಣಾಗುವಂತಹ ಸ್ಥಿತಿ ಇದೆ.</p>.<p>ಸಿವೇಜ್ಫಾರಂ ಮಗ್ಗುಲಿನಲ್ಲಿ ಹಾದು ಹೋಗುವ ಈ ರಸ್ತೆಯಲ್ಲಿ ಎಲ್ಲಿ ನೋಡಿದರಲ್ಲಿ ದೂಳೇ ದೂಳು ಕಣ್ಣಿಗೆ ರಾಚುತ್ತದೆ. ಲಾರಿ, ಟ್ರಾಕ್ಟರ್ಗಳ ಹಿಂದೆ ಹೋಗುವ ವಾಹನ ಸವಾರರ ಗೋಳು ಹೇಳತೀರದಾಗಿದೆ. ಸ್ವಲ್ಪ ಹೊತ್ತು ನಿಂತು ದೂಳೆಲ್ಲ ಕಡಿಮೆಯಾದ ಮೇಲೆಯೇ ಹೋಗುವ ಸ್ಥಿತಿ ನಿರ್ಮಾಣವಾಗಿದೆ.</p>.<p>ಅಲ್ಲಲ್ಲಿ ಉಂಟಾಗಿರುವ ಗುಂಡಿಗಳು ಅಪಘಾತಕ್ಕೆ ಆಹ್ವಾನ ನೀಡುವಂತಿವೆ. ಕೆಲವೊಂದು ಕಡೆ ರಸ್ತೆ ತುಂಬೆಲ್ಲ ಬರೀ ಕಲ್ಲುಗಳೇ ತುಂಬಿಕೊಂಡಿವೆ. ಈ ರಸ್ತೆಯಲ್ಲಿ ವಾಹನ ಚಾಲನೆ ಮಾಡಿದರೆ ಏದುಸಿರು ಬಿಡುವುದು ನಿಶ್ಚಿತ ಎಂಬಂತಾಗಿದೆ.</p>.<p>ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸ್ಥಳೀಯ ನಿವಾಸಿ ರಮೇಶ್, ‘ಈ ರಸ್ತೆ ಬಹಳಷ್ಟು ವರ್ಷಗಳಿಂದಲೂ ಹೀಗೆ ಇದೆ. ಡಾಂಬರು ಕಂಡು ಎಷ್ಟು ವರ್ಷವಾಯಿತೆಂಬುದು ನೆನಪಿಲ್ಲ. ಇಲ್ಲಿ ದೂಳು, ಸೊಳ್ಳೆಗಳ ಕಾಟಕ್ಕೆ ಮಿತಿಯೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಈ ಕುರಿತು ‘ಪ್ರಜಾವಾಣಿ’ ಈ ಭಾಗದ ಪಾಲಿಕೆ ಸದಸ್ಯರಾದ ಶೋಭಾ ಸುನಿಲ್ ಅವರನ್ನು ಸಂಪರ್ಕಿಸಿದಾಗ, ಈ ಸಮಸ್ಯೆ ಇನ್ನು ಕೆಲವು ದಿನಗಳು ಮಾತ್ರವಷ್ಟೇ ಇರುತ್ತದೆ. ಕೆಲವೇ ದಿನಗಳಲ್ಲಿ ಈ ರಸ್ತೆಗೆ ಡಾಂಬರು ಭಾಗ್ಯ ಬರಲಿದೆ ಎಂದರು.</p>.<p>ವಿದ್ಯಾರಣ್ಯಪುರಂ 16ನೇ ಕ್ರಾಸ್ನ ಶ್ರೀಕಂಠೇಶ್ವರ ಪ್ರಾವಿಷನ್ ಸ್ಟೋರ್ನಿಂದ ಆರಂಭವಾಗಿ ಸೀವೇಜ್ ಫಾರಂ ಮೂಲಕ ನಂಜನಗೂಡು ರಸ್ತೆಯವರೆಗೆ ₹2 ಕೋಟಿ ಮೊತ್ತದ ಟೆಂಡರ್ ಆಗಿದೆ. ಟೆಂಡರ್ ಪಡೆದ ಗುತ್ತಿಗೆದಾರರು ಬೇರೆ ಕಡೆ ಕೆಲಸ ಮಾಡಿಸುತ್ತಿದ್ದು, ಕೆಲವೇ ದಿನಗಳಲ್ಲಿ ಇಲ್ಲೂ ಕೆಲಸ ಆರಂಭಿಸಲಿದ್ದಾರೆ. ಬೇಗನೇ ದುರಸ್ತಿ ಮಾಡಿಸಲು ಒತ್ತಡ ಹೇರಲಾಗುತ್ತಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಇಲ್ಲಿನ ಕೆ.ಆರ್. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿದ್ಯಾರಣ್ಯಪುರಂನ ಬಹಳಷ್ಟು ರಸ್ತೆಗಳು ಸುಸ್ಥಿತಿಯಲ್ಲಿದ್ದರೂ, ಕೆಲ ರಸ್ತೆಗಳು ಇನ್ನೂ ದುರಾವಸ್ಥೆಯಲ್ಲೇ ಇವೆ.</p>.<p>ಪಾಲಿಕೆಯ 61ನೇ ವಾರ್ಡಿನ ವಿದ್ಯಾರಣ್ಯಪುರಂ 4ನೇ ಮೇನ್ನ ರಸ್ತೆ ಅಕ್ಷರಶಃ ಹಾಳಾಗಿದೆ. ಕಲ್ಲುಗಳು ಮುಳ್ಳುಗಳಂತೆ ಪುಟಿದೆದ್ದಿದ್ದು, ವಾಹನ ಸವಾರರು ಇಲ್ಲಿ ಹಾದು ಹೋಗುವಾಗ ಹೈರಣಾಗುವಂತಹ ಸ್ಥಿತಿ ಇದೆ.</p>.<p>ಸಿವೇಜ್ಫಾರಂ ಮಗ್ಗುಲಿನಲ್ಲಿ ಹಾದು ಹೋಗುವ ಈ ರಸ್ತೆಯಲ್ಲಿ ಎಲ್ಲಿ ನೋಡಿದರಲ್ಲಿ ದೂಳೇ ದೂಳು ಕಣ್ಣಿಗೆ ರಾಚುತ್ತದೆ. ಲಾರಿ, ಟ್ರಾಕ್ಟರ್ಗಳ ಹಿಂದೆ ಹೋಗುವ ವಾಹನ ಸವಾರರ ಗೋಳು ಹೇಳತೀರದಾಗಿದೆ. ಸ್ವಲ್ಪ ಹೊತ್ತು ನಿಂತು ದೂಳೆಲ್ಲ ಕಡಿಮೆಯಾದ ಮೇಲೆಯೇ ಹೋಗುವ ಸ್ಥಿತಿ ನಿರ್ಮಾಣವಾಗಿದೆ.</p>.<p>ಅಲ್ಲಲ್ಲಿ ಉಂಟಾಗಿರುವ ಗುಂಡಿಗಳು ಅಪಘಾತಕ್ಕೆ ಆಹ್ವಾನ ನೀಡುವಂತಿವೆ. ಕೆಲವೊಂದು ಕಡೆ ರಸ್ತೆ ತುಂಬೆಲ್ಲ ಬರೀ ಕಲ್ಲುಗಳೇ ತುಂಬಿಕೊಂಡಿವೆ. ಈ ರಸ್ತೆಯಲ್ಲಿ ವಾಹನ ಚಾಲನೆ ಮಾಡಿದರೆ ಏದುಸಿರು ಬಿಡುವುದು ನಿಶ್ಚಿತ ಎಂಬಂತಾಗಿದೆ.</p>.<p>ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸ್ಥಳೀಯ ನಿವಾಸಿ ರಮೇಶ್, ‘ಈ ರಸ್ತೆ ಬಹಳಷ್ಟು ವರ್ಷಗಳಿಂದಲೂ ಹೀಗೆ ಇದೆ. ಡಾಂಬರು ಕಂಡು ಎಷ್ಟು ವರ್ಷವಾಯಿತೆಂಬುದು ನೆನಪಿಲ್ಲ. ಇಲ್ಲಿ ದೂಳು, ಸೊಳ್ಳೆಗಳ ಕಾಟಕ್ಕೆ ಮಿತಿಯೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಈ ಕುರಿತು ‘ಪ್ರಜಾವಾಣಿ’ ಈ ಭಾಗದ ಪಾಲಿಕೆ ಸದಸ್ಯರಾದ ಶೋಭಾ ಸುನಿಲ್ ಅವರನ್ನು ಸಂಪರ್ಕಿಸಿದಾಗ, ಈ ಸಮಸ್ಯೆ ಇನ್ನು ಕೆಲವು ದಿನಗಳು ಮಾತ್ರವಷ್ಟೇ ಇರುತ್ತದೆ. ಕೆಲವೇ ದಿನಗಳಲ್ಲಿ ಈ ರಸ್ತೆಗೆ ಡಾಂಬರು ಭಾಗ್ಯ ಬರಲಿದೆ ಎಂದರು.</p>.<p>ವಿದ್ಯಾರಣ್ಯಪುರಂ 16ನೇ ಕ್ರಾಸ್ನ ಶ್ರೀಕಂಠೇಶ್ವರ ಪ್ರಾವಿಷನ್ ಸ್ಟೋರ್ನಿಂದ ಆರಂಭವಾಗಿ ಸೀವೇಜ್ ಫಾರಂ ಮೂಲಕ ನಂಜನಗೂಡು ರಸ್ತೆಯವರೆಗೆ ₹2 ಕೋಟಿ ಮೊತ್ತದ ಟೆಂಡರ್ ಆಗಿದೆ. ಟೆಂಡರ್ ಪಡೆದ ಗುತ್ತಿಗೆದಾರರು ಬೇರೆ ಕಡೆ ಕೆಲಸ ಮಾಡಿಸುತ್ತಿದ್ದು, ಕೆಲವೇ ದಿನಗಳಲ್ಲಿ ಇಲ್ಲೂ ಕೆಲಸ ಆರಂಭಿಸಲಿದ್ದಾರೆ. ಬೇಗನೇ ದುರಸ್ತಿ ಮಾಡಿಸಲು ಒತ್ತಡ ಹೇರಲಾಗುತ್ತಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>