ಡಿಪ್ಲೊಮಾ ಪೂರೈಸಿದ ವಿದ್ಯಾರ್ಥಿಗಳು ಮುಂದೆ ನೌಕರಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಬೇಕಿದ್ದು, ಎಲ್ಲ ಪರೀಕ್ಷೆಗಳಲ್ಲೂ ವಿಜ್ಞಾನ ಮತ್ತು ಗಣಿತಕ್ಕೆ ಸಂಬಂಧಿಸಿದ ಪ್ರಶ್ನೆಗಳೇ ಹೆಚ್ಚಿರುತ್ತವೆ. ವಿಜ್ಞಾನ ವಿಷಯಗಳನ್ನು ಕೈಬಿಟ್ಟಿರುವುದರಿಂದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೊಂದರೆಯಾಗಲಿದೆ. ಬೇರೆ ರಾಜ್ಯದ ವಿದ್ಯಾರ್ಥಿಗಳಿಗೆ ನಾವೇ ಕೆಂಪು ಹಾಸಿನ ಸ್ವಾಗತ ಕೊಟ್ಟು, ನಮ್ಮ ಹುದ್ದೆಗಳನ್ನು ಅವರಿಗೆ ಕೊಟ್ಟಂತಾಗುತ್ತಿದೆ ಎಂದಿದ್ದಾರೆ.