ಹುಣಸೂರು: ನಗರದ ಕಾರ್ಖಾನೆ ರಸ್ತೆಯಲ್ಲಿ ನಡೆದ ಮೋಟಾರ್ ಬೈಕ್ ಕಳವಿಗೆ ಸಂಬಂಧಿಸಿದ ಮೂವರು ಅಂತರ ಜಿಲ್ಲಾ ಕಳ್ಳರನ್ನು ಬಂಧಿಸಲಾಗಿದೆ ಎಂದು ಸಿಪಿಐ ಪೂವಯ್ಯ ತಿಳಿಸಿದರು.
ಮೈಸೂರು ಜಿಲ್ಲೆ ಹುಣಸೂರು, ಮಡಿಕೇರಿ ಮತ್ತು ಹಾಸನ ಜಿಲ್ಲೆ ಅರಕಲಗೂಡು ಠಾಣೆ ವ್ಯಾಪ್ತಿಯಲ್ಲಿ ನಡೆದ ಬೈಕ್ ಕಳವು ಪ್ರಕರಣದಲ್ಲಿ ಮೂರು ಆರೋಪಿಗಳು ಭಾಗಿ ಆಗಿರುವುದು ತನಿಖೆಯಿಂದ ತಿಳಿದು ಬಂದಿದೆ.
ಕುಶಾಲನಗರದ ಸುಬ್ರಹ್ಮಣ್ಯ, ವಿಕ್ಟರ್ ಮತ್ತು ಮದನ್ ಬಂಧಿತ ಆರೋಪಿಗಳು.
ಕಾರ್ಯಾಚರಣೆಯಲ್ಲಿ ಪಿಎಸ್ಐಗಳಾದ ಶಿವಕುಮಾರ್, ಲತೇಶ್ಕುಮಾರ್, ಪಂಚಾಕ್ಷರಿಸ್ವಾಮಿ, ಪ್ರಭಾಕರ್, ಪುಟ್ಟನಾಯಕ್ ಸಿಬ್ಬಂದಿ ಮಲ್ಲಿಕಾರ್ಜುನ, ಕಿರಣ್ಕುಮಾರ್, ಮನೋಹರ, ವೆಂಕಟೇಶ ಪ್ರಸಾದ್ ಇದ್ದರು.