ನದಿಯ ಅಂಚಿನಲ್ಲಿ ಗಿಡಗಂಟಿಗಳು ಹೆಚ್ಚಾಗಿದ್ದು, ಮಹಿಳೆಯರು ಬಟ್ಟೆ ತೊಳೆಯಲು, ನೀರು ತರಲು, ನದಿಗೆ ಸ್ನಾನಕ್ಕೆಂದು ಬಂದರೆ ಗಿಡಗಳು ಹೆಚ್ಚು ಬೆಳೆದಿದ್ದರಿಂದ ನದಿಗೆ ಇಳಿಯಲು ತೊಂದರೆಯಾಗುವುದನ್ನು ಕಂಡ ಸಂಘ ಸಂಸ್ಥೆಗಳು ಸ್ವಚ್ಛತೆಗೆ ಮುಂದಾಗಿದ್ದವು. ಇದಕ್ಕೆ ಕೈಜೋಡಿಸಿದ ಪಟ್ಟಣ ಪಂಚಾಯಿತಿ ಸದಸ್ಯರು, ಸುಮಾರು 40-50 ಜನ ಸ್ವಯಂ ಪ್ರೇರಣೆಯಿಂದ ಗಿಡಗಂಟಿಗಳ ತೆರವು ಮಾಡಿದರು.