ರಾಜ್ಯ ಸರ್ಕಾರವು 1961ರ ಭೂ–ಸುಧಾರಣೆ ಕಾಯ್ದೆಯ 79–ಎ, ಬಿ, ಸಿ ಮತ್ತು 80ನೇ ಕಲಂಗಳನ್ನು ಪೂರ್ವಾನ್ವಯವಾಗುವಂತೆ ರದ್ದುಪಡಿಸಲಾಗಿದೆ. ಕೃಷಿ ಭೂಮಿ ಸುಲಭವಾಗಿ ಕೈಗಾರಿಕೋದ್ಯಮಿಗಳು, ರಿಯಲ್ ಎಸ್ಟೇಟ್ ಮಾಲೀಕರು ಪಡೆದುಕೊಳ್ಳುವಂತೆ 63ನೇ ಕಲಂ ಹಾಗೂ 80ನೇ ಕಲಂಗೂ ತಿದ್ದುಪಡಿ ತಂದಿದೆ. ಇದರಿಂದ ಶ್ರೀಮಂತರು, ಬಹುರಾಷ್ಟ್ರೀಯ ಕಂಪನಿಗಳು (ಎಂಎನ್ಸಿ) ಕೃಷಿ ಭೂಮಿಯನ್ನು ಕಬಳಿಸುತ್ತವೆ. ಸಣ್ಣ ರೈತರು ಕೃಷಿಯಿಂದ ಹೊರಗೆ ಉಳಿಯುತ್ತಾರೆ. ಎಂಎನ್ಸಿಗಳ ಹಿಡಿತದಿಂದಾಗಿ ಆಹಾರ ಸ್ವಾವಲಂಬನೆ ಹಾಗೂ ಸಾರ್ವಭೌಮತ್ವಕ್ಕೆ ಧಕ್ಕೆ ಬರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.