ಇದರ ಕುತ್ತಿಗೆಗೆ ಉರುಳು ಬಿಗಿದುಕೊಂಡು ಗಾಯವಾಗಿ ಕೀವು ತುಂಬಿಕೊಂಡಿತ್ತು. ಇದರಲ್ಲಿ ಹುಳುಗಳು ಉಂಟಾಗಿದ್ದು, ಆಹಾರ ಸೇವಿಸದ ಸ್ಥಿತಿಗೆ ಚಿರತೆ ತಲುಪಿದೆ. ದೇಹದಲ್ಲಿ ಸ್ನಾಯುಗಳು ಬಲಹೀನವಾಗಿದ್ದವು. ಸೆರೆ ಹಿಡಿದ ತಕ್ಷಣ ಪ್ರಥಮ ಚಿಕಿತ್ಸೆ ನೀಡಿ ಚಾಮರಾಜೇಂದ್ರ ಮೃಗಾಲಯಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಸಾಗಿಸುವ ವೇಳೆ ಸಾವನ್ನಪ್ಪಿದೆ.