ಗ್ರಾಮದ ನಂದನ್ ಕುಮಾರ್ (12), ತಮ್ಮ ಜಮೀನಿನಲ್ಲಿನ ಹಸುವಿಗೆ ಹುಲ್ಲು ಹಾಕಲು ತೆರಳುತ್ತಿದ್ದಾಗ ಚಿರತೆ ದಾಳಿ ಮಾಡಿದೆ. ಕುತ್ತಿಗೆ, ತೋಳಿಗೆ ಪರಚಿ ಗಾಯಗೊಳಿಸಿದೆ. ಈ ಸಂದರ್ಭದಲ್ಲಿ ಬಾಲಕನು ಚಿರತೆಯ ಕಣ್ಣಿಗೆ ಬೆರಳಿನಿಂದ ತಿವಿದಿದ್ದಾನೆ. ತಕ್ಷಣ, ಚಿರತೆ ಈತನನ್ನು ಬಿಟ್ಟು ಪರಾರಿಯಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.