‘ಕೆಲವು ಸಂಘಟನೆಗಳು ವೇದಿಕೆಯಲ್ಲಿ ಗುರುತಿಸಿಕೊಂಡಿವೆ. ತಿದ್ದುಪಡಿ ಕಾಯ್ದೆ ವಿರುದ್ಧ ಸೋಮವಾರದಿಂದಲೇ (ಆ.3) ಮೈಸೂರು, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಿವೆ. ‘ನಮ್ಮೂರ ಭೂಮಿ ನಮಗಿರಲಿ; ಅನ್ಯರಿಗಲ್ಲ, ಉಳುವವರಿಗೇ ಭೂಮಿ; ಉಳ್ಳವರಿಗಲ್ಲ’ ಎಂಬ ಎರಡು ಘೋಷ ವಾಕ್ಯದ ನಾಮಫಲಕ ಚಳವಳಿಗೂ ಚಾಲನೆ ನೀಡಲಿವೆ’ ಎಂದು ಗಾಯತ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.