ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತೆ, ಕಾವಾ ಡೀನ್ ಬಿ.ಆರ್.ಪೂರ್ಣಿಮಾ ಮಾತನಾಡಿ, ‘ತರಗತಿಯಲ್ಲಿ ಕುಳಿತು ಪಠ್ಯ ಕೇಳುವುದೇ ಶಿಕ್ಷಣವಲ್ಲ. ಪ್ರಾಯೋಗಿಕವಾಗಿಯೂ ಇಂತಹ ಶಿಬಿರಗಳ ಮೂಲಕ ವಿದ್ಯೆ ಕಲಿಯಬೇಕಿದೆ. ದಶಕದ ಬಳಿಕ ಕಾವಾ ಆವರಣದಲ್ಲಿ ರಾಷ್ಟ್ರೀಯ ಶಿಬಿರ ಆಯೋಜನೆಗೊಂಡಿದ್ದು, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು’ ಎಂದು ಸಲಹೆ ನೀಡಿದರು.