ಮೈಸೂರು:ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳ ಸಂಚಾರ ಆರಂಭವಾಗಿದ್ದು, ವಿವಿಧೆಡೆಗೆ ತೆರಳಲು ಪ್ರಯಾಣಿಕರು ಗ್ರಾಮಾಂತರ ನಿಲ್ದಾಣದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದಾರೆ.
ಬೆಂಗಳೂರು, ಮಡಿಕೇರಿ, ಮಂಗಳೂರು, ಹಾಸನ, ಚಾಮರಾಜನಗರ ಕಡೆ ತೆರಳಲು ಹೆಚ್ಚು ಬೇಡಿಕೆ ಇದೆ. ಹೀಗಾಗಿ, ಆ ಭಾಗಕ್ಕೆ ಹೆಚ್ಚು ಬಸ್ ಬಿಡಲಾಗುತ್ತಿದೆ. ಬಸ್ ಹತ್ತುವವರ ಜೊತೆಗೆ ತಮ್ಮೂರಿಗೆ ಬಸ್ ಇದೆಯೇ ಎಂದು ವಿಚಾರಿಸಲು ಬರುತ್ತಿದ್ದಾರೆ.
ನಗರ ಬಸ್ ನಿಲ್ದಾಣದಿಂದ ವಿವಿಧ ಮಾರ್ಗಗಳ ಬಸ್ ಸಂಚಾರ ಆರಂಭವಾಗಿದೆ. ಅಂತರ ಕಾಯ್ದುಕೊಳ್ಳಲು ಮಾರ್ಕ್ ಹಾಕಿದ್ದು, ಹೆಚ್ಚು ದಟ್ಟಣೆ ಇಲ್ಲದ ಕಾರಣ ಪಾಲನೆ ಮಾಡುತ್ತಿದ್ದಾರೆ.