ಸಭೆಯಲ್ಲಿ ಪ್ರಮುಖ ವಿಷಯಗಳು, ಅನುದಾನದ ಬಗ್ಗೆ ಸುಮಾರು ಎಂಟು ತಾಸು ಚರ್ಚೆ ನಡೆಯಲಿದೆ. ಕೋವಿಡ್ ಪರಿಸ್ಥಿತಿ ಇರುವ ಕಾರಣ ಪಾಲಿಕೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಯ ಆರೋಗ್ಯ ಕಾಳಜಿ ವಹಿಸುವುದು ನಮ್ಮ ಕರ್ತವ್ಯ. ಹೀಗಾಗಿ, ಎಲ್ಲರಿಗೂ ಆರ್ಟಿ ಪಿಸಿಆರ್ ಪರೀಕ್ಷೆ ಮಾಡಿಸಲಾಗುವುದು. ಮಾಧ್ಯಮದವರನ್ನೂ ಪರೀಕ್ಷೆಗೆ ಒಳಪಡಿಸಲಾಗುವುದು ಎಂದರು.