ಸರಗೂರು (ಮೈಸೂರು ಜಿಲ್ಲೆ): ತಾಲ್ಲೂಕಿನ ಚಾಮೇಗೌಡನಹುಂಡಿಯಲ್ಲಿ ಮಣಿಕಂಠಸ್ವಾಮಿ ಎಂಬಾತ ತನ್ನ ತಾಯಿ, ಗರ್ಭಿಣಿ ಪತ್ನಿ, ಇಬ್ಬರು ಮಕ್ಕಳನ್ನು ಬುಧವಾರ ತಡರಾತ್ರಿ ಕೊಲೆಗೈದು ಪರಾರಿಯಾಗಿದ್ದಾನೆ.
ಕೆಂಪಾಜಮ್ಮ (60), ಪತ್ನಿ ಗಂಗಾ (28), ಪುತ್ರರಾದ ಸಾಮ್ರಾಟ್(4) ಹಾಗೂ ರೋಹಿತ್ (2) ಕೊಲೆಯಾದವರು.
ಆರೋಪಿ ಟೈಲರ್ ವೃತ್ತಿ ಮಾಡುತ್ತಿದ್ದ. 8ವರ್ಷದ ಹಿಂದೆ ಮದುವೆಯಾಗಿದ್ದು, ಆಗಾಗ್ಗೆ ಜಗಳವಾಗುತ್ತಿತ್ತು. ಸಂಬಂಧಿಕರು ರಾಜಿ ಮಾಡಿ ಒಂದಾಗಿಸುತ್ತಿದ್ದರು. ಕೊಲೆಗೆ ಕಾರಣ ತಿಳಿದು ಬಂದಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.