<p><strong>ಮೈಸೂರು:</strong> ಚಾಲಕನ ಆರೋಗ್ಯ ಹದಗೆಟ್ಟ ಕಾರಣ, ಪಾಲಿಕೆ ಜನನ ಹಾಗೂ ಮರಣ ವಿಭಾಗದ ಸಾಂಖ್ಯಿಕ ಅಧಿಕಾರಿ ಅನಿಲ್ ಕ್ರಿಸ್ಟಿ ಅವರು ತಾವೇ ಆಂಬುಲೆನ್ಸ್ ಚಾಲನೆ ಮಾಡಿಕೊಂಡು, ಶವ ಸಾಗಿಸಿದ್ದಾರೆ.</p>.<p>ಈ ಘಟನೆ ಬುಧವಾರ ನಡೆದಿದ್ದು, ಅಧಿಕಾರಿಯ ಸಮಯೋಚಿತ ಕೆಲಸಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಆ ದಿನ ಕೆಲಸ ಮಾಡುತ್ತಿದ್ದ ಆಂಬುಲೆನ್ಸ್ ಚಾಲಕ ರವಿ, ಮಧ್ಯಾಹ್ನದ ವೇಳೆಗೆ ಬಿಸಿಲಿನಿಂದ ಬಳಲಿ ಸುಸ್ತಾಗಿದ್ದಾರೆ. ತಕ್ಷಣಕ್ಕೆ ಯಾರೂ ಚಾಲಕರು ಲಭಿಸಿಲ್ಲ. ಹೀಗಾಗಿ, ಈ ಅಧಿಕಾರಿಯು ಪಿಪಿಇ ಕಿಟ್ ಧರಿಸಿ, ತಾವೇ ಆಂಬುಲೆನ್ಸ್ಗೆ ಶವವನ್ನು ಹಾಕಿಕೊಂಡು ಚಿತಾಗಾರಕ್ಕೆ ತೆರಳಿದ್ದಾರೆ. ಅಂದು ಸಂಜೆವರೆಗೆ ನಾಲ್ಕು ಟ್ರಿಪ್ಗಳಲ್ಲಿ ಶವ ಸಾಗಿಸಿದ್ದಾರೆ.</p>.<p>‘ಅನಾರೋಗ್ಯದಿಂದ ಬಳಲುತ್ತಿದ್ದ ಚಾಲಕ ರವಿ ಅವರನ್ನು ಮನೆಗೆ ಕಳುಹಿಸಿದೆ. ಅಂದು ಕೆ.ಆರ್.ಆಸ್ಪತ್ರೆಯಲ್ಲಿ ಹೆಚ್ಚು ಮೃತ ದೇಹಗಳು ಇದ್ದವು. ಹೊರಗೆ, ಮೃತರ ಕುಟುಂಬದವರು ಕೂಡ ಕಾಯುತ್ತಿದ್ದರು. ಹೀಗಾಗಿ, ಈ ಕೆಲಸಕ್ಕೆ ಮುಂದಾದೆ’ ಎಂದು ಅನಿಲ್ ಕ್ರಿಸ್ಟಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.</p>.<p>ಕೋವಿಡ್ ಮೊದಲ ಅಲೆ ಸಂದರ್ಭದಿಂದಲೂ ಅವರು, ಪಾಲಿಕೆಯ ಕೋವಿಡ್ ಶವ ಸಂಸ್ಕಾರದ ನೋಡೆಲ್ ಅಧಿಕಾರಿಯಾಗಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಅವರ ಸಾರಥ್ಯದಲ್ಲಿ ಇದುವರೆಗೆ 1,221 ಸೋಂಕಿತರ ಶವಗಳನ್ನು ಇಲ್ಲಿನ ವಿಜಯನಗರ ನಾಲ್ಕನೇ ಹಂತದಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ಸುಡಲಾಗಿದೆ.</p>.<p>‘ಶವಾಗಾರದ ಕಾವಲುಗಾರರು, ಶವ ಸುಡುವವರು ಹಾಗೂ ಆಂಬುಲೆನ್ಸ್ನ ಎಲ್ಲಾ ಚಾಲಕರು ವರ್ಷದಿಂದ ಸಾಕಷ್ಟು ಶ್ರಮ ಹಾಕಿ ಕೆಲಸ ಮಾಡುತ್ತಿದ್ದಾರೆ’ ಎಂದು ಕ್ರಿಸ್ಟಿ ಹೇಳಿದರು.</p>.<p>ಕೋವಿಡ್ ಸೋಂಕಿತರ ಶವ ಸಾಗಿಸುವ ಆಂಬುಲೆನ್ಸ್ ಚಾಲಕ ಆಯೂಬ್ ಅಹ್ಮದ್ ಹಾಗೂ ಚಿತಾಗಾರದ ಇತರ ನೌಕರರು, ಅಧಿಕಾರಿಯ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.</p>.<p>***</p>.<p>ಅಂದು, ಮೃತರ ಕುಟುಂಬದವರು ದೂರದಿಂದ ಬಂದು ಕಾಯುತ್ತಿದ್ದರು. ನಾನು ಶವ ಸಾಗಿಸದಿದ್ದರೆ ಅವರೆಲ್ಲ ಮತ್ತೊಂದು ದಿನ ಕಾಯಬೇಕಾಗುತ್ತಿತ್ತು.</p>.<p><em><strong>-ಅನಿಲ್ ಕ್ರಿಸ್ಟಿ, ಪಾಲಿಕೆ ಸಾಂಖ್ಯಿಕ ಅಧಿಕಾರಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಚಾಲಕನ ಆರೋಗ್ಯ ಹದಗೆಟ್ಟ ಕಾರಣ, ಪಾಲಿಕೆ ಜನನ ಹಾಗೂ ಮರಣ ವಿಭಾಗದ ಸಾಂಖ್ಯಿಕ ಅಧಿಕಾರಿ ಅನಿಲ್ ಕ್ರಿಸ್ಟಿ ಅವರು ತಾವೇ ಆಂಬುಲೆನ್ಸ್ ಚಾಲನೆ ಮಾಡಿಕೊಂಡು, ಶವ ಸಾಗಿಸಿದ್ದಾರೆ.</p>.<p>ಈ ಘಟನೆ ಬುಧವಾರ ನಡೆದಿದ್ದು, ಅಧಿಕಾರಿಯ ಸಮಯೋಚಿತ ಕೆಲಸಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಆ ದಿನ ಕೆಲಸ ಮಾಡುತ್ತಿದ್ದ ಆಂಬುಲೆನ್ಸ್ ಚಾಲಕ ರವಿ, ಮಧ್ಯಾಹ್ನದ ವೇಳೆಗೆ ಬಿಸಿಲಿನಿಂದ ಬಳಲಿ ಸುಸ್ತಾಗಿದ್ದಾರೆ. ತಕ್ಷಣಕ್ಕೆ ಯಾರೂ ಚಾಲಕರು ಲಭಿಸಿಲ್ಲ. ಹೀಗಾಗಿ, ಈ ಅಧಿಕಾರಿಯು ಪಿಪಿಇ ಕಿಟ್ ಧರಿಸಿ, ತಾವೇ ಆಂಬುಲೆನ್ಸ್ಗೆ ಶವವನ್ನು ಹಾಕಿಕೊಂಡು ಚಿತಾಗಾರಕ್ಕೆ ತೆರಳಿದ್ದಾರೆ. ಅಂದು ಸಂಜೆವರೆಗೆ ನಾಲ್ಕು ಟ್ರಿಪ್ಗಳಲ್ಲಿ ಶವ ಸಾಗಿಸಿದ್ದಾರೆ.</p>.<p>‘ಅನಾರೋಗ್ಯದಿಂದ ಬಳಲುತ್ತಿದ್ದ ಚಾಲಕ ರವಿ ಅವರನ್ನು ಮನೆಗೆ ಕಳುಹಿಸಿದೆ. ಅಂದು ಕೆ.ಆರ್.ಆಸ್ಪತ್ರೆಯಲ್ಲಿ ಹೆಚ್ಚು ಮೃತ ದೇಹಗಳು ಇದ್ದವು. ಹೊರಗೆ, ಮೃತರ ಕುಟುಂಬದವರು ಕೂಡ ಕಾಯುತ್ತಿದ್ದರು. ಹೀಗಾಗಿ, ಈ ಕೆಲಸಕ್ಕೆ ಮುಂದಾದೆ’ ಎಂದು ಅನಿಲ್ ಕ್ರಿಸ್ಟಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.</p>.<p>ಕೋವಿಡ್ ಮೊದಲ ಅಲೆ ಸಂದರ್ಭದಿಂದಲೂ ಅವರು, ಪಾಲಿಕೆಯ ಕೋವಿಡ್ ಶವ ಸಂಸ್ಕಾರದ ನೋಡೆಲ್ ಅಧಿಕಾರಿಯಾಗಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಅವರ ಸಾರಥ್ಯದಲ್ಲಿ ಇದುವರೆಗೆ 1,221 ಸೋಂಕಿತರ ಶವಗಳನ್ನು ಇಲ್ಲಿನ ವಿಜಯನಗರ ನಾಲ್ಕನೇ ಹಂತದಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ಸುಡಲಾಗಿದೆ.</p>.<p>‘ಶವಾಗಾರದ ಕಾವಲುಗಾರರು, ಶವ ಸುಡುವವರು ಹಾಗೂ ಆಂಬುಲೆನ್ಸ್ನ ಎಲ್ಲಾ ಚಾಲಕರು ವರ್ಷದಿಂದ ಸಾಕಷ್ಟು ಶ್ರಮ ಹಾಕಿ ಕೆಲಸ ಮಾಡುತ್ತಿದ್ದಾರೆ’ ಎಂದು ಕ್ರಿಸ್ಟಿ ಹೇಳಿದರು.</p>.<p>ಕೋವಿಡ್ ಸೋಂಕಿತರ ಶವ ಸಾಗಿಸುವ ಆಂಬುಲೆನ್ಸ್ ಚಾಲಕ ಆಯೂಬ್ ಅಹ್ಮದ್ ಹಾಗೂ ಚಿತಾಗಾರದ ಇತರ ನೌಕರರು, ಅಧಿಕಾರಿಯ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.</p>.<p>***</p>.<p>ಅಂದು, ಮೃತರ ಕುಟುಂಬದವರು ದೂರದಿಂದ ಬಂದು ಕಾಯುತ್ತಿದ್ದರು. ನಾನು ಶವ ಸಾಗಿಸದಿದ್ದರೆ ಅವರೆಲ್ಲ ಮತ್ತೊಂದು ದಿನ ಕಾಯಬೇಕಾಗುತ್ತಿತ್ತು.</p>.<p><em><strong>-ಅನಿಲ್ ಕ್ರಿಸ್ಟಿ, ಪಾಲಿಕೆ ಸಾಂಖ್ಯಿಕ ಅಧಿಕಾರಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>