ಈ ಘಟನೆ ಬುಧವಾರ ನಡೆದಿದ್ದು, ಅಧಿಕಾರಿಯ ಸಮಯೋಚಿತ ಕೆಲಸಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಆ ದಿನ ಕೆಲಸ ಮಾಡುತ್ತಿದ್ದ ಆಂಬುಲೆನ್ಸ್ ಚಾಲಕ ರವಿ, ಮಧ್ಯಾಹ್ನದ ವೇಳೆಗೆ ಬಿಸಿಲಿನಿಂದ ಬಳಲಿ ಸುಸ್ತಾಗಿದ್ದಾರೆ. ತಕ್ಷಣಕ್ಕೆ ಯಾರೂ ಚಾಲಕರು ಲಭಿಸಿಲ್ಲ. ಹೀಗಾಗಿ, ಈ ಅಧಿಕಾರಿಯು ಪಿಪಿಇ ಕಿಟ್ ಧರಿಸಿ, ತಾವೇ ಆಂಬುಲೆನ್ಸ್ಗೆ ಶವವನ್ನು ಹಾಕಿಕೊಂಡು ಚಿತಾಗಾರಕ್ಕೆ ತೆರಳಿದ್ದಾರೆ. ಅಂದು ಸಂಜೆವರೆಗೆ ನಾಲ್ಕು ಟ್ರಿಪ್ಗಳಲ್ಲಿ ಶವ ಸಾಗಿಸಿದ್ದಾರೆ.