‘ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಹಾಗೂ ಶ್ರೀರಂಗಪಟ್ಟಣ ಪಟ್ಟಣದಲ್ಲಿ ಮಾತ್ರ ಆಗಮನ ಹಾಗೂ ನಿರ್ಗಮನ ದ್ವಾರ ಇರಲಿದ್ದು, ಉಳಿದೆಡೆ ಸಂಪೂರ್ಣವಾಗಿ ಚೈನ್ ಲಿಂಕ್ ಇರಲಿದೆ. ಜನ, ಜಾನುವಾರು ಪ್ರವೇಶಿಸಲು, ಮಧ್ಯದಲ್ಲಿ ವಾಹನಗಳು ಬೇರೆಡೆ ಹೋಗಲು ಸ್ಥಳಾವಕಾಶ ಇರುವುದಿಲ್ಲ. ಇದರಿಂದ ಅಪಘಾತ ತಪ್ಪಿಸಬಹುದಾಗಿದ್ದು, ಬೆಂಗಳೂರಿನಿಂದ ಮೈಸೂರಿಗೆ 90 ನಿಮಿಷಗಳಲ್ಲಿ ತಲುಪಬಹುದು. ಬಿಡದಿ ಹಾಗೂ ಗಣಂಗೂರು ಬಳಿ ಟೋಲ್ ಇರಲಿದೆ. ಎರಡು ಪಥದ ಸರ್ವೀಸ್ ರಸ್ತೆಯೂ ಇರಲಿದೆ’ ಎಂದು ಸಂಸದ ಪ್ರತಾಪಸಿಂಹ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.