‘ಬಹುರೂಪಿಯನ್ನು ಬಹಿಷ್ಕರಿ ಸಲು ಕೆಲವರು ಕರೆಕೊಟ್ಟಿದ್ದರು. ಆದರೆ, 10 ದಿನ ಕಾಲವೂ ಸಾವಿರಾರು ರಂಗಪ್ರೇಮಿಗಳು ಬಂದಿದ್ದು, ಉತ್ಸವವನ್ನು ಯಶಸ್ವಿಗೊಳಿಸಿದ್ದಾರೆ. ಇಷ್ಟು ವರ್ಷ ಇಲ್ಲಿ ಉತ್ಸವ, ವಿಚಾರ ಸಂಕಿರಣಗಳ ಹೆಸರಿನಲ್ಲಿ ಒಂದೇ ಸಿದ್ಧಾಂತ ಮತ್ತು ವಾದವನ್ನು ಜನರ ತಲೆಗೆ ತುರುಕಲಾಗಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ರಂಗಾಯಣ ಎಲ್ಲರಿಗೂ ಮುಕ್ತವಾಗಿದೆ’ ಎಂದರು.