‘ಮಹಾನಗರಪಾಲಿಕೆ ಮತ್ತು ಜಿಲ್ಲಾಡಳಿತವು ಟ್ರಸ್ಟ್ಗೆ ಸಯ್ಯಾಜಿರಾವ್ ರಸ್ತೆಯ ಆಯುರ್ವೇದ ಕಾಲೇಜಿನ ಮುಂಭಾಗದಲ್ಲಿ ಸ್ಥಳಾವಕಾಶ ಮಾಡಿಕೊಟ್ಟಿದೆ. ಅಲ್ಲಿ ಸಾವಿರಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರಿಗೆ ಶಾಮಿಯಾನ–ಕುರ್ಚಿ ಹಾಕಿ ವ್ಯವಸ್ಥೆ ಕಲ್ಪಿಸಲಾಗುವುದು. ಉಚಿತವಾಗಿ ಬಿಸ್ಕೆಟ್, ನೀರು–ಉಪಹಾರ ನೀಡಲಾಗುವುದು. ಇಂಗ್ಲಿಷ್ ಮತ್ತು ಸ್ಪ್ಯಾನಿಷ್ ಭಾಷೆಯಲ್ಲಿ ಮೆರವಣಿಗೆಯ ವೀಕ್ಷಕ ವಿವರಣೆ ಕೊಡಲಾಗುವುದು’ ಎಂದು ಟ್ರಸ್ಟ್ನ ಸಂಚಾಲಕದೇವರಾಜು ತಿಳಿಸಿದ್ದಾರೆ.