<p><strong>ಮೈಸೂರು: </strong>ಇಲ್ಲಿನ ಪೊಲೀಸ್ ಬಡಾವಣೆಯ 2ನೇ ಹಂತದಲ್ಲಿರುವ ಸುಮಾರು 3 ಸಾವಿರ ಕುಟುಂಬಗಳಿಗೆ ಕುಡಿಯಲು ಶುದ್ಧವಾದ ನೀರಿಲ್ಲ. 3 ದಿನಗಳಿಗೊಮ್ಮೆ ನೀರು ಬರುತ್ತಿದೆಯಾದರೂ ಅದು ಕುಡಿಯಲು ಯೋಗ್ಯವಾಗಿಲ್ಲ. ಸದ್ಯ, ಇಷ್ಟು ನಿವಾಸಿಗಳು ಇರುವ ಒಂದೇ ಒಂದು ನೀರು ಶುದ್ಧೀಕರಣ ಘಟಕದಿಂದ ₹ 5 ಹಾಕಿ ನೀರು ಪಡೆಯಬೇಕಿದೆ.</p>.<p>ಸರ್ದಾರ್ ವಲ್ಲಭಭಾಯ್ ಪಟೇಲ್ ನಗರದಲ್ಲಿ ಪೊಲೀಸ್ ನೌಕರರ ಗೃಹನಿರ್ಮಾಣ ಸಹಕಾರ ಸಂಘವು ರಚಿಸಿದ ಬಡಾವಣೆ ಇದು. ಇಲ್ಲಿರುವವರ ಪೈಕಿ ಬಹುತೇಕ ಮಂದಿ ಪೊಲೀಸರು. ಆದರೆ, ಇವರಿಗೆ ಇಲ್ಲಿ ಕುಡಿಯಲು ಶುದ್ಧವಾದ ನೀರೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.</p>.<p>ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಈ ಬಡಾವಣೆಗೆ ಅನುಮತಿ ನೀಡಿದೆ. ನಿವಾಸಿಗಳು ಕಂದಾಯವನ್ನು ‘ಮುಡಾ’ಗೆ ನಿಯತವಾಗಿ ಪಾವತಿಸುತ್ತಿದ್ದಾರೆ. ಆದರೆ, ಕುಡಿಯುವ ನೀರಿನ ಹೊಣೆಗಾರಿಕೆಯಿಂದ ‘ಮುಡಾ’ ಜಾರಿಕೊಂಡಿದೆ. ಕೂಗಳತೆ ದೂರದಲ್ಲಿ ನದಿಮೂಲದಿಂದ ಕುಡಿಯುವ ನೀರು ಪೂರೈಕೆಯಾಗುತ್ತಿದೆಯಾದರೂ ಇಲ್ಲಿಗೆ ನೀರು ಪೂರೈಕೆಯಾಗುತ್ತಿಲ್ಲ.</p>.<p>ಇಲ್ಲಿರುವ 5 ಕೊಳವೆಬಾವಿಗಳ ಪೈಕಿ ಮೂರು ಈಗಾಗಲೇ ಬತ್ತಿ ಹೋಗಿವೆ. ಕರ್ನಾಟಕ ಮೃಗಾಲಯ ಪ್ರಾಧಿಕಾರದವರು ಇಲ್ಲಿದ್ದ ಕೆರೆಯೊಂದನ್ನು ಪುನರುಜ್ಜೀವನಗೊಳಿಸಿದ್ದರಿಂದ ಕೆರೆಯಲ್ಲಿ ಅಲ್ಪಸ್ಪಲ್ವ ನೀರಿದೆ. ಹೀಗಾಗಿ, ಇಲ್ಲಿರುವ 2 ಕೊಳವೆಬಾವಿಗಳಲ್ಲಿ ಮಾತ್ರ ನೀರಿದೆ. ಇದೇ ಈ ಬಡಾವಣೆಗೆ ಕುಡಿಯುವ ನೀರನ್ನು ಪೂರೈಕೆ ಮಾಡುವ ಮೂಲ.</p>.<p>ಈ ಕೊಳವೆಬಾವಿಗಳಿಂದ ಸರಬರಾಜಾಗುತ್ತಿರುವ ನೀರು ಕುಡಿಯಲು ಯೋಗ್ಯವಾಗಿಲ್ಲ. ಕ್ಯಾಲ್ಸಿಯಂ ಅಂಶಗಳು ಹೇರಳವಾಗಿವೆ. ನೇರವಾಗಿ ಕುಡಿದರೆ ಮೂತ್ರಪಿಂಡದಲ್ಲಿ ಕಲ್ಲು ಉಂಟಾಗುವುದು ಖಚಿತ ಎಂಬಂತಾಗಿದೆ. ಈ ನೀರೂ ಸಿಗುವುದು ಮೂರು ದಿನಗಳಿಗೊಮ್ಮೆ ಮಾತ್ರ.</p>.<p>ಹಣವಿದ್ದ ಕೆಲವರು ಕೊಳವೆಬಾವಿಗಳನ್ನು ಕೊರೆಸಿಕೊಂಡಿದ್ದಾರೆ. ಮತ್ತೆ ಕೆಲವರು ₹ 500 ಕೊಟ್ಟು ಟ್ಯಾಂಕರ್ ನೀರನ್ನು ತರಿಸಿಕೊಳ್ಳುತ್ತಿದ್ದಾರೆ. ಇಲ್ಲದವರು 3 ದಿನಗಳು ಇಲ್ಲವೇ 4 ದಿನಗಳಿಗೊಮ್ಮೆ ಸರಬರಾಜಾಗುವ ಈ ನೀರನ್ನೇ ಅವಲಂಬಿಸಬೇಕಿದೆ. ನೀರಿನ ಶುದ್ಧಿಕರಣಕ್ಕೆ ಹಾಕುವ ವಾಟರ್ ಫಿಲ್ಟರ್ಗಳು ಕೆಲವೇ ದಿನಗಳಲ್ಲಿ ಕೆಟ್ಟು ಹೋಗುತ್ತಿವೆ. ಹೀಗಾಗಿ, ಇರುವ ಒಂದೇ ಒಂದು ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರನ್ನು ಪಡೆಯಬೇಕಿದೆ.</p>.<p>‘ಇದೇ ಪರಿಸ್ಥಿತಿ ಜೆಎಸ್ಎಸ್ ಬಡಾವಣೆ, ಕೆಎಸ್ಆರ್ಟಿಸಿ ಬಡಾವಣೆ, ವಸಂತ ನಗರ, ಪ್ರಕೃತಿ ಬಡಾವಣೆ, ಸಹೃದಯ ಲೇಔಟ್, ಸಪ್ತಮಾತೃಕಾ ಬಡಾವಣೆ ಸೇರಿದಂತೆ ಹಲವೆಡೆ ಇದೆ’ ಎಂದು ಸಮೀಪದ ಜೆಎಸ್ಎಸ್ ಬಡಾವಣೆಯ ಶಿವಪ್ಪ ಹೇಳುತ್ತಾರೆ.</p>.<p>‘ಇದು ಹೆಸರಿಗೆ ಪೊಲೀಸ್ ಲೇಔಟ್. ಇಲ್ಲಿರುವ ಬಹುತೇಕ ಮಂದಿ ಪೊಲೀಸರೇ. ಇವರ ಸಂಸಾರದವರಿಗೆ ನೀರಿಲ್ಲದಂತಹ ಸ್ಥಿತಿ ಇದೆ. ಸರ್ಕಾರ ಈ ಕಡೆ ನೋಡಬೇಕು’ ಎಂದುಸ್ಥಳೀಯ ನಿವಾಸಿ ನಂಜುಂಡಸ್ವಾಮಿ ಒತ್ತಾಯಿಸುತ್ತಾರೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಇಲ್ಲಿನ ಪೊಲೀಸ್ ಬಡಾವಣೆಯ 2ನೇ ಹಂತದಲ್ಲಿರುವ ಸುಮಾರು 3 ಸಾವಿರ ಕುಟುಂಬಗಳಿಗೆ ಕುಡಿಯಲು ಶುದ್ಧವಾದ ನೀರಿಲ್ಲ. 3 ದಿನಗಳಿಗೊಮ್ಮೆ ನೀರು ಬರುತ್ತಿದೆಯಾದರೂ ಅದು ಕುಡಿಯಲು ಯೋಗ್ಯವಾಗಿಲ್ಲ. ಸದ್ಯ, ಇಷ್ಟು ನಿವಾಸಿಗಳು ಇರುವ ಒಂದೇ ಒಂದು ನೀರು ಶುದ್ಧೀಕರಣ ಘಟಕದಿಂದ ₹ 5 ಹಾಕಿ ನೀರು ಪಡೆಯಬೇಕಿದೆ.</p>.<p>ಸರ್ದಾರ್ ವಲ್ಲಭಭಾಯ್ ಪಟೇಲ್ ನಗರದಲ್ಲಿ ಪೊಲೀಸ್ ನೌಕರರ ಗೃಹನಿರ್ಮಾಣ ಸಹಕಾರ ಸಂಘವು ರಚಿಸಿದ ಬಡಾವಣೆ ಇದು. ಇಲ್ಲಿರುವವರ ಪೈಕಿ ಬಹುತೇಕ ಮಂದಿ ಪೊಲೀಸರು. ಆದರೆ, ಇವರಿಗೆ ಇಲ್ಲಿ ಕುಡಿಯಲು ಶುದ್ಧವಾದ ನೀರೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.</p>.<p>ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಈ ಬಡಾವಣೆಗೆ ಅನುಮತಿ ನೀಡಿದೆ. ನಿವಾಸಿಗಳು ಕಂದಾಯವನ್ನು ‘ಮುಡಾ’ಗೆ ನಿಯತವಾಗಿ ಪಾವತಿಸುತ್ತಿದ್ದಾರೆ. ಆದರೆ, ಕುಡಿಯುವ ನೀರಿನ ಹೊಣೆಗಾರಿಕೆಯಿಂದ ‘ಮುಡಾ’ ಜಾರಿಕೊಂಡಿದೆ. ಕೂಗಳತೆ ದೂರದಲ್ಲಿ ನದಿಮೂಲದಿಂದ ಕುಡಿಯುವ ನೀರು ಪೂರೈಕೆಯಾಗುತ್ತಿದೆಯಾದರೂ ಇಲ್ಲಿಗೆ ನೀರು ಪೂರೈಕೆಯಾಗುತ್ತಿಲ್ಲ.</p>.<p>ಇಲ್ಲಿರುವ 5 ಕೊಳವೆಬಾವಿಗಳ ಪೈಕಿ ಮೂರು ಈಗಾಗಲೇ ಬತ್ತಿ ಹೋಗಿವೆ. ಕರ್ನಾಟಕ ಮೃಗಾಲಯ ಪ್ರಾಧಿಕಾರದವರು ಇಲ್ಲಿದ್ದ ಕೆರೆಯೊಂದನ್ನು ಪುನರುಜ್ಜೀವನಗೊಳಿಸಿದ್ದರಿಂದ ಕೆರೆಯಲ್ಲಿ ಅಲ್ಪಸ್ಪಲ್ವ ನೀರಿದೆ. ಹೀಗಾಗಿ, ಇಲ್ಲಿರುವ 2 ಕೊಳವೆಬಾವಿಗಳಲ್ಲಿ ಮಾತ್ರ ನೀರಿದೆ. ಇದೇ ಈ ಬಡಾವಣೆಗೆ ಕುಡಿಯುವ ನೀರನ್ನು ಪೂರೈಕೆ ಮಾಡುವ ಮೂಲ.</p>.<p>ಈ ಕೊಳವೆಬಾವಿಗಳಿಂದ ಸರಬರಾಜಾಗುತ್ತಿರುವ ನೀರು ಕುಡಿಯಲು ಯೋಗ್ಯವಾಗಿಲ್ಲ. ಕ್ಯಾಲ್ಸಿಯಂ ಅಂಶಗಳು ಹೇರಳವಾಗಿವೆ. ನೇರವಾಗಿ ಕುಡಿದರೆ ಮೂತ್ರಪಿಂಡದಲ್ಲಿ ಕಲ್ಲು ಉಂಟಾಗುವುದು ಖಚಿತ ಎಂಬಂತಾಗಿದೆ. ಈ ನೀರೂ ಸಿಗುವುದು ಮೂರು ದಿನಗಳಿಗೊಮ್ಮೆ ಮಾತ್ರ.</p>.<p>ಹಣವಿದ್ದ ಕೆಲವರು ಕೊಳವೆಬಾವಿಗಳನ್ನು ಕೊರೆಸಿಕೊಂಡಿದ್ದಾರೆ. ಮತ್ತೆ ಕೆಲವರು ₹ 500 ಕೊಟ್ಟು ಟ್ಯಾಂಕರ್ ನೀರನ್ನು ತರಿಸಿಕೊಳ್ಳುತ್ತಿದ್ದಾರೆ. ಇಲ್ಲದವರು 3 ದಿನಗಳು ಇಲ್ಲವೇ 4 ದಿನಗಳಿಗೊಮ್ಮೆ ಸರಬರಾಜಾಗುವ ಈ ನೀರನ್ನೇ ಅವಲಂಬಿಸಬೇಕಿದೆ. ನೀರಿನ ಶುದ್ಧಿಕರಣಕ್ಕೆ ಹಾಕುವ ವಾಟರ್ ಫಿಲ್ಟರ್ಗಳು ಕೆಲವೇ ದಿನಗಳಲ್ಲಿ ಕೆಟ್ಟು ಹೋಗುತ್ತಿವೆ. ಹೀಗಾಗಿ, ಇರುವ ಒಂದೇ ಒಂದು ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರನ್ನು ಪಡೆಯಬೇಕಿದೆ.</p>.<p>‘ಇದೇ ಪರಿಸ್ಥಿತಿ ಜೆಎಸ್ಎಸ್ ಬಡಾವಣೆ, ಕೆಎಸ್ಆರ್ಟಿಸಿ ಬಡಾವಣೆ, ವಸಂತ ನಗರ, ಪ್ರಕೃತಿ ಬಡಾವಣೆ, ಸಹೃದಯ ಲೇಔಟ್, ಸಪ್ತಮಾತೃಕಾ ಬಡಾವಣೆ ಸೇರಿದಂತೆ ಹಲವೆಡೆ ಇದೆ’ ಎಂದು ಸಮೀಪದ ಜೆಎಸ್ಎಸ್ ಬಡಾವಣೆಯ ಶಿವಪ್ಪ ಹೇಳುತ್ತಾರೆ.</p>.<p>‘ಇದು ಹೆಸರಿಗೆ ಪೊಲೀಸ್ ಲೇಔಟ್. ಇಲ್ಲಿರುವ ಬಹುತೇಕ ಮಂದಿ ಪೊಲೀಸರೇ. ಇವರ ಸಂಸಾರದವರಿಗೆ ನೀರಿಲ್ಲದಂತಹ ಸ್ಥಿತಿ ಇದೆ. ಸರ್ಕಾರ ಈ ಕಡೆ ನೋಡಬೇಕು’ ಎಂದುಸ್ಥಳೀಯ ನಿವಾಸಿ ನಂಜುಂಡಸ್ವಾಮಿ ಒತ್ತಾಯಿಸುತ್ತಾರೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>