ಅದರಂತೆ ಪ್ರತಿಯೊಬ್ಬ ಫಲಾನುಭವಿ ಮನೆ ಮನೆಗೆ ತೆರಳಿದ ಪಾಲಿಕೆ ಅಧಿಕಾರಿಗಳು, ದಾಖಲಾತಿ ಸಂಗ್ರಹಿಸಿ ಸಂಬಂಧಿಸಿದ ತಂತ್ರಾಂಶಕ್ಕೆ ಅಪ್ಲೋಡ್ ಮಾಡಿದರು. ಈ ಕೆಲಸದಲ್ಲಿ 11,600ಕ್ಕೂ ಹೆಚ್ಚು ಜನರ ನಿಖರ ದಾಖಲಾತಿಗಳನ್ನು ಸೇರ್ಪಡೆಗೊಳಿಸಲಾಗಿದೆ. ಇದರಿಂದ ಬಹು ಕಾಲದ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ. ಜೊತೆಗೆ ಅರ್ಹರಿಗೆ ಮಾಸಾಶನವೂ ಎಂದಿನಂತೆ ದೊರೆಯಲಿದೆ’ ಎಂದು ಶಾಸಕರು ಹೇಳಿದರು.