<p><strong>ಮೈಸೂರು:</strong> ‘ಅಪ್ಪ ತೋರಿಸಿದ ದಸರೆಯಲ್ಲಿನ ‘ಏರ್ಶೊ’ ನೋಡಿದ ನನಗೆ ಪೈಲಟ್ ಆಗಬೇಕು ಎಂಬ ಕನಸು ಚಿಗೊರೊಡೆಯಿತು’ ಎಂದು ಭಾರತೀಯ ವಾಯುಪಡೆಯ ‘ಟ್ರೈನಿ’ ಪೈಲಟ್ ಪುಣ್ಯಾ ನಂಜಪ್ಪ ತಿಳಿಸಿದರು.</p>.<p>ಇಲ್ಲಿನ ಎಂಜಿನಿಯರುಗಳ ಸಂಸ್ಥೆಯಲ್ಲಿ ಬುಧವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ನನ್ನ ಕನಸಿಗೆ ಅಪ್ಪ, ಅಮ್ಮ ನೀರೆರೆದರು. ನಂತರ, ಭಾರತೀಯ ವಾಯುಪಡೆಯ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆದೆ. ‘ಫ್ಲೈಯಿಂಗ್ ಬ್ರಾಂಚ್’ಗೆ ಆಯ್ಕೆಯಾದೆ’ ಎಂದು ಹೇಳಿದರು.</p>.<p>‘ಈ ವೇಳೆ ‘ಸೈಕ್ಲಿಂಗ್’ ಮಾಡುವಾಗ ನಾನು ಬಿದ್ದು ಗಾಯಗೊಂಡೆ. ಎದ್ದೇಳಲು ಆಗದಷ್ಟು ಪೆಟ್ಟಾಗಿತ್ತು. ಅದೊಂದು ಜೀವನದ ದುರ್ಭರ ಪ್ರಸಂಗ. ವೈದ್ಯಕೀಯವಾಗಿ ನಾನು ಫಿಟ್ ಆಗುತ್ತೇನೋ ಇಲ್ಲವೋ ಎಂಬ ದುಗುಡ ಇತ್ತು. ಕೊನೆಗೆ, ನಾನು ಚೇತರಿಸಿಕೊಂಡೆ ವೈದ್ಯಕೀಯ ಅರ್ಹತಾ ಪ್ರಮಾಣಪತ್ರವೂ ಸಿಕ್ಕಿತು’ ಎಂದು ವಿವರಿಸಿದರು.</p>.<p>ಶಾಲೆ ಮತ್ತು ಕಾಲೇಜುಗಳ ದಿನಗಳಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದ್ದು ‘ಟ್ರೈನಿ’ ಪೈಲಟ್ ಆಗಿ ಆಯ್ಕೆಗೊಳ್ಳಲು ಕಾರಣವಾಯಿತು ಎಂದು ಅವರು ಹೇಳಿದರು.</p>.<p>ಇದೇ ಸಂದರ್ಭದಲ್ಲಿ ಪುಣ್ಯ ನಂಜಪ್ಪ ಅವರನ್ನು ಸಂಸ್ಥೆಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಡಾ.ಆರ್.ಸುರೇಶ್, ಕಾರ್ಯದರ್ಶಿ ಡಾ.ಡಿ.ಕೆ. ಸುರೇಶ್ ಇದ್ದರು.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಅಪ್ಪ ತೋರಿಸಿದ ದಸರೆಯಲ್ಲಿನ ‘ಏರ್ಶೊ’ ನೋಡಿದ ನನಗೆ ಪೈಲಟ್ ಆಗಬೇಕು ಎಂಬ ಕನಸು ಚಿಗೊರೊಡೆಯಿತು’ ಎಂದು ಭಾರತೀಯ ವಾಯುಪಡೆಯ ‘ಟ್ರೈನಿ’ ಪೈಲಟ್ ಪುಣ್ಯಾ ನಂಜಪ್ಪ ತಿಳಿಸಿದರು.</p>.<p>ಇಲ್ಲಿನ ಎಂಜಿನಿಯರುಗಳ ಸಂಸ್ಥೆಯಲ್ಲಿ ಬುಧವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ನನ್ನ ಕನಸಿಗೆ ಅಪ್ಪ, ಅಮ್ಮ ನೀರೆರೆದರು. ನಂತರ, ಭಾರತೀಯ ವಾಯುಪಡೆಯ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆದೆ. ‘ಫ್ಲೈಯಿಂಗ್ ಬ್ರಾಂಚ್’ಗೆ ಆಯ್ಕೆಯಾದೆ’ ಎಂದು ಹೇಳಿದರು.</p>.<p>‘ಈ ವೇಳೆ ‘ಸೈಕ್ಲಿಂಗ್’ ಮಾಡುವಾಗ ನಾನು ಬಿದ್ದು ಗಾಯಗೊಂಡೆ. ಎದ್ದೇಳಲು ಆಗದಷ್ಟು ಪೆಟ್ಟಾಗಿತ್ತು. ಅದೊಂದು ಜೀವನದ ದುರ್ಭರ ಪ್ರಸಂಗ. ವೈದ್ಯಕೀಯವಾಗಿ ನಾನು ಫಿಟ್ ಆಗುತ್ತೇನೋ ಇಲ್ಲವೋ ಎಂಬ ದುಗುಡ ಇತ್ತು. ಕೊನೆಗೆ, ನಾನು ಚೇತರಿಸಿಕೊಂಡೆ ವೈದ್ಯಕೀಯ ಅರ್ಹತಾ ಪ್ರಮಾಣಪತ್ರವೂ ಸಿಕ್ಕಿತು’ ಎಂದು ವಿವರಿಸಿದರು.</p>.<p>ಶಾಲೆ ಮತ್ತು ಕಾಲೇಜುಗಳ ದಿನಗಳಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದ್ದು ‘ಟ್ರೈನಿ’ ಪೈಲಟ್ ಆಗಿ ಆಯ್ಕೆಗೊಳ್ಳಲು ಕಾರಣವಾಯಿತು ಎಂದು ಅವರು ಹೇಳಿದರು.</p>.<p>ಇದೇ ಸಂದರ್ಭದಲ್ಲಿ ಪುಣ್ಯ ನಂಜಪ್ಪ ಅವರನ್ನು ಸಂಸ್ಥೆಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಡಾ.ಆರ್.ಸುರೇಶ್, ಕಾರ್ಯದರ್ಶಿ ಡಾ.ಡಿ.ಕೆ. ಸುರೇಶ್ ಇದ್ದರು.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>