ಮಲ್ಲೇಶ್ ಅವರಿಗೆ ತಂದೆ ಹೆಸರಿನಲ್ಲಿ ಒಂದು ಎಕರೆ ಜಮೀನು ಇದೆ. ಸಹಕಾರ ಸಂಘದಲ್ಲಿ ₹30 ಸಾವಿರ ಹಾಗೂ ಟ್ರಾಕ್ಟರ್ ಖರೀದಿಗೆಖಾಸಗಿ ಬ್ಯಾಂಕ್ನಲ್ಲಿ ₹7 ಲಕ್ಷ ಸಾಲ ಮಾಡಿದ್ದರು. ನಿರೀಕ್ಷಿತ ಬೆಳೆ ಬರದಿದ್ದರಿಂದ ಶುಕ್ರವಾರ ಸಂಜೆ ಜಮೀನಿಗೆ ತೆರಳಿ ಕ್ರಿಮಿನಾಶಕ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶನಿವಾರ ಬೆಳಿಗ್ಗೆ ಜಮೀನಿಗೆ ಹೋದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ ಎಂದು ಮೃತರ ಪತ್ನಿ ಸಾಕಮ್ಮ ತಿಳಿಸಿದ್ದಾರೆ.