<p><strong>ಮೈಸೂರು: </strong>ಹುಣಸೂರು ಪಟ್ಟಣ ಠಾಣೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಂದ 20 ಗ್ರಾಂ ತೂಕದ ಚಿನ್ನದ ಸರ, ₹ 5,800 ನಗದು, ಬೈಕು ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.</p>.<p>ಬೆಂಗಳೂರಿನ ಬಾಗಲೂರಿನ ನಿವಾಸಿಗಳಾದ ಪ್ರದೀಪ ಹಾಗೂ ಸ್ನೇಹಿತರು ಹೊಸ ವರ್ಷಾಚರಣೆ ಸಂಭ್ರಮಾಚರಣೆಗಾಗಿ ಸೋಮವಾರ ರಾತ್ರಿ 11ರ ಸಮಯದಲ್ಲಿ ಮಡಿಕೇರಿಗೆ ತೆರಳುವಾಗ, ಹುಣಸೂರು–ಮೈಸೂರು ರಸ್ತೆಯ ರೊಟೆನಾ ಹೋಟೆಲ್ ಬಳಿ ಊಟಕ್ಕೆ ಹೋಟೆಲ್ ತೋರಿಸುವ ನೆವದಲ್ಲಿ ಈ ಆರೋಪಿಗಳು ಅವರನ್ನು ಪರಿಚಯಿಸಿಕೊಂಡು, ಬಳಿಕ ಚಾಕು ತೋರಿಸಿ 20 ಗ್ರಾಂ ತೂಕದ ಚಿನ್ನದ ಸರ ಹಾಗೂ ಕಾರು ಕೀ, ₹ 7 ಸಾವಿರವನ್ನು ದರೋಡೆ ಮಾಡಿದ್ದರು.</p>.<p>ವಿಷಯ ತಿಳಿಯುತ್ತಿದ್ದಂತೆ ಕಾರ್ಯಪ್ರವೃತ್ತರಾದ ಹುಣಸೂರು ಉಪವಿಭಾಗದ ಡಿವೈಎಸ್ಪಿ ಸುಂದರ್ರಾಜ್ ನೇತೃತ್ವದ ತಂಡವು ಚೆಕ್ಪೋಸ್ಟ್ಗಳನ್ನು ರಚಿಸಿತು. ಈ ವೇಳೆ ಕಲ್ಕುಣಿಕೆ ವೃತ್ತದ ಬಳಿಯ ಚೆಕ್ಪೋಸ್ಟ್ನಲ್ಲಿ ಮಂಗಳವಾರ ಬೆಳಿಗ್ಗೆ 11ರ ಸಮಯದಲ್ಲಿ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.</p>.<p>ಹುಣಸೂರು ಇನ್ಸ್ಪೆಕ್ಟರ್ ಕೆ.ಸಿ.ಪೂವಯ್ಯ, ಗ್ರಾಮಾಂತರ ಠಾಣೆಯ ಪಿಎಸ್ಐ ಎಸ್.ಶಿವಪ್ರಕಾಶ್ ಸಿಬ್ಬಂದಿಯಾದ ಮೆಹರಾಜ್ ಪಾಷಾ, ಮಂಜುನಾಥ್, ರಾಜೇಗೌಡ, ನಾಗೇಶ, ಮನೋಹರ, ದಿನೇಶ್, ಅಲಿಂಪಾಷಾ, ಎಸ್.ಮಂಜುನಾಥ ಕಾರ್ಯಾಚರಣೆ ತಂಡದಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಹುಣಸೂರು ಪಟ್ಟಣ ಠಾಣೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಂದ 20 ಗ್ರಾಂ ತೂಕದ ಚಿನ್ನದ ಸರ, ₹ 5,800 ನಗದು, ಬೈಕು ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.</p>.<p>ಬೆಂಗಳೂರಿನ ಬಾಗಲೂರಿನ ನಿವಾಸಿಗಳಾದ ಪ್ರದೀಪ ಹಾಗೂ ಸ್ನೇಹಿತರು ಹೊಸ ವರ್ಷಾಚರಣೆ ಸಂಭ್ರಮಾಚರಣೆಗಾಗಿ ಸೋಮವಾರ ರಾತ್ರಿ 11ರ ಸಮಯದಲ್ಲಿ ಮಡಿಕೇರಿಗೆ ತೆರಳುವಾಗ, ಹುಣಸೂರು–ಮೈಸೂರು ರಸ್ತೆಯ ರೊಟೆನಾ ಹೋಟೆಲ್ ಬಳಿ ಊಟಕ್ಕೆ ಹೋಟೆಲ್ ತೋರಿಸುವ ನೆವದಲ್ಲಿ ಈ ಆರೋಪಿಗಳು ಅವರನ್ನು ಪರಿಚಯಿಸಿಕೊಂಡು, ಬಳಿಕ ಚಾಕು ತೋರಿಸಿ 20 ಗ್ರಾಂ ತೂಕದ ಚಿನ್ನದ ಸರ ಹಾಗೂ ಕಾರು ಕೀ, ₹ 7 ಸಾವಿರವನ್ನು ದರೋಡೆ ಮಾಡಿದ್ದರು.</p>.<p>ವಿಷಯ ತಿಳಿಯುತ್ತಿದ್ದಂತೆ ಕಾರ್ಯಪ್ರವೃತ್ತರಾದ ಹುಣಸೂರು ಉಪವಿಭಾಗದ ಡಿವೈಎಸ್ಪಿ ಸುಂದರ್ರಾಜ್ ನೇತೃತ್ವದ ತಂಡವು ಚೆಕ್ಪೋಸ್ಟ್ಗಳನ್ನು ರಚಿಸಿತು. ಈ ವೇಳೆ ಕಲ್ಕುಣಿಕೆ ವೃತ್ತದ ಬಳಿಯ ಚೆಕ್ಪೋಸ್ಟ್ನಲ್ಲಿ ಮಂಗಳವಾರ ಬೆಳಿಗ್ಗೆ 11ರ ಸಮಯದಲ್ಲಿ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.</p>.<p>ಹುಣಸೂರು ಇನ್ಸ್ಪೆಕ್ಟರ್ ಕೆ.ಸಿ.ಪೂವಯ್ಯ, ಗ್ರಾಮಾಂತರ ಠಾಣೆಯ ಪಿಎಸ್ಐ ಎಸ್.ಶಿವಪ್ರಕಾಶ್ ಸಿಬ್ಬಂದಿಯಾದ ಮೆಹರಾಜ್ ಪಾಷಾ, ಮಂಜುನಾಥ್, ರಾಜೇಗೌಡ, ನಾಗೇಶ, ಮನೋಹರ, ದಿನೇಶ್, ಅಲಿಂಪಾಷಾ, ಎಸ್.ಮಂಜುನಾಥ ಕಾರ್ಯಾಚರಣೆ ತಂಡದಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>