ಯುಪಿಎ ಸರ್ಕಾರ ಮಾಡಿಕೊಂಡಿದ್ದ ಒಡಂಬಡಿಕೆಯಿಂದ ದಕ್ಷಿಣ ಭಾರತದಲ್ಲಿ ತಂಬಾಕು ಬೆಳೆಯುವ ಸಾವಿರಾರು ರೈತರು ತೊಂದರೆ ಎದುರಿಸುವ ಭೀತಿಯಲ್ಲಿದ್ದರು. ವಿಶ್ವ ಆರೋಗ್ಯ ಸಂಸ್ಥೆಯು ತಂಬಾಕು ನಿಷೇಧಿಸುವ ಪ್ರಸ್ತಾವ ಮುಂದಿಟ್ಟಿತ್ತು. 2020ಕ್ಕೆ ತಂಬಾಕು ಬೆಳೆ ಬೆಳೆಯುವುದನ್ನು ಅಂತ್ಯಗೊಳಿಸಲು ಸೂಚನೆ ನೀಡಿತ್ತು. ಆದರೆ, ಇದನ್ನು ಧಿಕ್ಕರಿಸಿದ್ದ ಬ್ರೆಜಿಲ್, ದಕ್ಷಿಣ ಆಫ್ರಿಕಾ, ಚೀನಾದಂತಹ ರಾಷ್ಟ್ರಗಳು ತಂಬಾಕು ಉತ್ಪಾದನೆಯನ್ನು ಮುಂದುವರೆಸಿವೆ. ಆದರೆ, ಭಾರತಕ್ಕೆ ಏಕೆ ನಿಯಂತ್ರಣ ಹೇರಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಆರೋಗ್ಯ ಸಂಸ್ಥೆಗೆ ಪತ್ರ ಬರೆದಿದ್ದಾರೆ ಎಂದು ವಿವರಿಸಿದರು.