ನಾನು ಶಾಸಕನಾಗಿದ್ದ ಅವಧಿಯಲ್ಲಿ ಬಡವರಿಗಾಗಿ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಮನೆಗಳನ್ನು ನಿರ್ಮಿಸಿಕೊಡಲು ಮಳಲವಾಡಿಯಲ್ಲಿ 3.5 ಎಕರೆ ಹಾಗೂ ವಿಶ್ವೇಶ್ವರನಗರದಲ್ಲಿ 1.5 ಎಕರೆ ಭೂಮಿಯನ್ನು ಮೀಸಲಿರಿಸಲಾಗಿತ್ತು. ಲಲಿತಾದ್ರಿಪುರದಲ್ಲಿ 1,140, ಗುರೂರಿನಲ್ಲಿ 1,644 ಮನೆಗಳ ಕಾಮಗಾರಿ ಆರಂಭವೂ ಆಗಿತ್ತು. ಆದರೆ, ಈಗ ಇದು ನಿಂತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.