<p>ಮೈಸೂರು: ಇಲ್ಲಿನ ಎನ್ಟಿಎಂ ಶಾಲೆಯ ಮುಂಭಾಗ ಹಾಗೂ ನಿರಂಜನ ಮಠದ ಆವರಣದಲ್ಲಿ ಬುಧವಾರ ಪ್ರತಿಭಟನೆಗಳು ಮುಂದುವರಿದಿವೆ.</p>.<p>ಮಹಾರಾಣಿ (ಎನ್ಟಿಎಂ) ಶಾಲೆ ಉಳಿಸಿ ಹೋರಾಟ ಒಕ್ಕೂಟದ ಮುಖಂಡರು, ಕಾರ್ಯಕರ್ತರು ಇದರಲ್ಲಿ ಭಾಗಿಯಾದರು.</p>.<p>ಹೋರಾಟಗಾರರಾದ ಪ.ಮಲ್ಲೇಶ್, ಸ.ರ.ಸುದರ್ಶನ್, ಪುರುಷೋತ್ತಮ್, ಭಾನುಮೋಹನ್ ಹಾಗೂ ಇತರರು ಇದ್ದರು.</p>.<p class="Subhead">ನಿರಂಜನಮಠದ ಆವರಣದಲ್ಲಿ ಮುಂದುವರಿದ ಪ್ರತಿಭಟನೆ</p>.<p>ನಿರಂಜನ ಮಠದ ಆವರಣದಲ್ಲಿ 6ನೇ ದಿನವಾದ ಬುಧವಾರ ವೀರಶೈವ, ಲಿಂಗಾಯತ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಯಿತು.</p>.<p>ಈ ವೇಳೆ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಶರಣು ಮಹದೇವಪ್ಪ, ‘ಮಠ ಕೆಡವಿ ಸ್ಮಾರಕ ನಿರ್ಮಿಸುವುದು ಸರಿಯಲ್ಲ’ ಎಂದು ಟೀಕಿಸಿದರು. ‘ಲಿಂಗಾಯತ, ವೀರಶೈವರಿಗೆ ಸೇರಿದ 70 ಸಂಘಟನೆಗಳಿದ್ದು, ನಿತ್ಯ ಒಂದೊಂದು ಸಂಸ್ಥೆಗಳು ಪ್ರತಿಭಟನೆಯಲ್ಲಿ ಭಾಗವಹಿಸುತ್ತಿವೆ’ ಎಂದರು.</p>.<p>ಹೋರಾಟಗಾರ ಉಗ್ರನರಸಿಂಹೇಗೌಡ ಮಾತನಾಡಿ, ‘ನಿರಂಜನ ಮಠದ ಆವರಣದಲ್ಲಿ ವಿವೇಕ ಸ್ಮಾರಕ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ ದೊರೆತಿರುವುದು 2013ರಲ್ಲಿ. ಆದರೆ, ಇಲ್ಲಿರುವ ಶಿಲಾಫಲಕದಲ್ಲಿ 2012ರಲ್ಲಿ ನವೀಕೃತ ವಿವೇಕ ಸ್ಮಾರಕ ಉದ್ಘಾಟನೆ ಎಂದಿದೆ. ಹಾಗಾದರೆ, ಈ ಮೊದಲೇ ವಿವೇಕ ಸ್ಮಾರಕ ಇತ್ತೆ?’ ಎಂದು ಪ್ರಶ್ನಿಸಿದರು.</p>.<p>ಹೊಸಮಠದ ಚಿದಾನಂದ ಸ್ವಾಮೀಜಿ ಮಠಕ್ಕೆ ಭೇಟಿ ನೀಡಿದ್ದರು. ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಲೋಕೇಶ್, ಮುಖಂಡರಾದ ಗುರುಸ್ವಾಮಿ, ಹಿನಕಲ್ ಬಸವರಾಜ್, ಲಾವಿದ ಶಿವಲಿಂಗಪ್ಪ, ಮಂಜುನಾಥ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ಇಲ್ಲಿನ ಎನ್ಟಿಎಂ ಶಾಲೆಯ ಮುಂಭಾಗ ಹಾಗೂ ನಿರಂಜನ ಮಠದ ಆವರಣದಲ್ಲಿ ಬುಧವಾರ ಪ್ರತಿಭಟನೆಗಳು ಮುಂದುವರಿದಿವೆ.</p>.<p>ಮಹಾರಾಣಿ (ಎನ್ಟಿಎಂ) ಶಾಲೆ ಉಳಿಸಿ ಹೋರಾಟ ಒಕ್ಕೂಟದ ಮುಖಂಡರು, ಕಾರ್ಯಕರ್ತರು ಇದರಲ್ಲಿ ಭಾಗಿಯಾದರು.</p>.<p>ಹೋರಾಟಗಾರರಾದ ಪ.ಮಲ್ಲೇಶ್, ಸ.ರ.ಸುದರ್ಶನ್, ಪುರುಷೋತ್ತಮ್, ಭಾನುಮೋಹನ್ ಹಾಗೂ ಇತರರು ಇದ್ದರು.</p>.<p class="Subhead">ನಿರಂಜನಮಠದ ಆವರಣದಲ್ಲಿ ಮುಂದುವರಿದ ಪ್ರತಿಭಟನೆ</p>.<p>ನಿರಂಜನ ಮಠದ ಆವರಣದಲ್ಲಿ 6ನೇ ದಿನವಾದ ಬುಧವಾರ ವೀರಶೈವ, ಲಿಂಗಾಯತ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಯಿತು.</p>.<p>ಈ ವೇಳೆ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಶರಣು ಮಹದೇವಪ್ಪ, ‘ಮಠ ಕೆಡವಿ ಸ್ಮಾರಕ ನಿರ್ಮಿಸುವುದು ಸರಿಯಲ್ಲ’ ಎಂದು ಟೀಕಿಸಿದರು. ‘ಲಿಂಗಾಯತ, ವೀರಶೈವರಿಗೆ ಸೇರಿದ 70 ಸಂಘಟನೆಗಳಿದ್ದು, ನಿತ್ಯ ಒಂದೊಂದು ಸಂಸ್ಥೆಗಳು ಪ್ರತಿಭಟನೆಯಲ್ಲಿ ಭಾಗವಹಿಸುತ್ತಿವೆ’ ಎಂದರು.</p>.<p>ಹೋರಾಟಗಾರ ಉಗ್ರನರಸಿಂಹೇಗೌಡ ಮಾತನಾಡಿ, ‘ನಿರಂಜನ ಮಠದ ಆವರಣದಲ್ಲಿ ವಿವೇಕ ಸ್ಮಾರಕ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ ದೊರೆತಿರುವುದು 2013ರಲ್ಲಿ. ಆದರೆ, ಇಲ್ಲಿರುವ ಶಿಲಾಫಲಕದಲ್ಲಿ 2012ರಲ್ಲಿ ನವೀಕೃತ ವಿವೇಕ ಸ್ಮಾರಕ ಉದ್ಘಾಟನೆ ಎಂದಿದೆ. ಹಾಗಾದರೆ, ಈ ಮೊದಲೇ ವಿವೇಕ ಸ್ಮಾರಕ ಇತ್ತೆ?’ ಎಂದು ಪ್ರಶ್ನಿಸಿದರು.</p>.<p>ಹೊಸಮಠದ ಚಿದಾನಂದ ಸ್ವಾಮೀಜಿ ಮಠಕ್ಕೆ ಭೇಟಿ ನೀಡಿದ್ದರು. ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಲೋಕೇಶ್, ಮುಖಂಡರಾದ ಗುರುಸ್ವಾಮಿ, ಹಿನಕಲ್ ಬಸವರಾಜ್, ಲಾವಿದ ಶಿವಲಿಂಗಪ್ಪ, ಮಂಜುನಾಥ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>