‘ಹಣ ಪಾವತಿಸಿದ್ದು, ಇದುವರೆಗೆ ನೋಂದಣಿ ಆಗಿಲ್ಲ. ಬೇರೆ ಕಡೆಯೂ ಜಾಗ ಕಲ್ಪಿಸಿಲ್ಲ. ಬಾಡಿಗೆ ಮನೆಯಲ್ಲಿ ಜೀವನ ಮಾಡುತ್ತಾ, ನಿವೇಶನದ ನಿರೀಕ್ಷೆಯಲ್ಲೇ ಹಲವು ಫಲಾನುಭವಿಗಳು ಮರಣ ಹೊಂದಿದ್ದು, ಇನ್ನೂ ಕೆಲವರು ಕಾಯಿಲೆಯಿಂದ ನರಳುತ್ತಿದ್ದಾರೆ. ಅವರ ಕುಟುಂಬಗಳು ಚಿಂತಾಜನಕ ಸ್ಥಿತಿಯಲ್ಲಿವೆ. ನ್ಯಾಯಾಲಯದ ತೀರ್ಪು ಕೂಡ ಫಲಾನುಭವಿಗಳ ಪರವಾಗಿಯೇ ಇದೆ. ಆದ್ದರಿಂದ ನಮಗೆ ಹಕ್ಕುಪತ್ರ ಕೊಡಿಸಿ’ ಎಂದು ನೊಂದ ಫಲಾನುಭವಿಗಳು ಆಗ್ರಹಿಸಿದರು.