‘ಎಚ್.ಡಿ.ಕೋಟೆ ತಾಲ್ಲೂಕಿನಾದ್ಯಂತ ಶುಕ್ರವಾರ ಉತ್ತಮ ಮಳೆ ಸುರಿದಿದ್ದು, ರೈತರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಒಂದು ತಿಂಗಳಿನಿಂದ ಸರಿಯಾಗಿ ಮಳೆ ಸುರಿಯದಿದ್ದರಿಂದ ರೈತ ಸಮೂಹ ಕಂಗಾಲಾಗಿತ್ತು. ಹಲವೆಡೆ ಬೆಳೆ ಒಣಗುತ್ತಿದ್ದವು. ಹತ್ತಿ, ಹೊಗೆಸೊಪ್ಪು, ಜೋಳ ಸೇರಿದಂತೆ ಇತರೆ ಬೆಳೆಗಳು ಒಣಗಿವೆ. ಇದೀಗ ಮಳೆಯಾಗಿದ್ದರಿಂದ ಕೆಲ ಬೆಳೆಗಳು ಇಳುವರಿ ಕೊಡಲ್ಲ’ ಎಂದು ರೈತ ಮುಖಂಡ ಕೆ.ಎಂ.ಹಳ್ಳಿ ಮಹದೇಸ್ವಾಮಿ ತಿಳಿಸಿದರು.