ಅಮಿತ್ ನಾಡಿಗರ ಕೊಳಲಿನ ನಾದದ ವೇಗಕ್ಕೆ ತಾಳವಾದ್ಯಗಳ ಹಿಮ್ಮೇಳ, ಅಮೋಘ ವರ್ಷ ಅವರ ಡ್ರಮ್ಸ್ ಕೇಳುಗರನ್ನು ತುದಿಗಾಲಿನಲ್ಲಿ ನಿಲ್ಲಿಸಿತು. ಅರೆಕ್ಷಣವು ಕಣ್ಣು ಮಿಟುಕಿಸದಂತೆ ಎಲ್ಲ ವಾದ್ಯಕಾರರು ತಮ್ಮತ್ತ ಸೆಳೆಯುತ್ತಿದ್ದರು. ಮುತ್ತುಸ್ವಾಮಿ ದೀಕ್ಷಿತರ ಕಲ್ಯಾಣಿ ರಾಗದ ‘ಶಿವಕಾಮೇಶ್ವರಿ’ ಕೃತಿಯನ್ನು ವಾದ್ಯಕಾರರು ನುಡಿಸುತ್ತಿದ್ದರೆ, ಸುರಿಯುತ್ತಿದ್ದ ಸೋನೆ ಮಳೆಯು ಭಾವ–ಭಕುತಿಯನ್ನು ಸಿಂಚನ ಮಾಡುತ್ತಿದೆ ಎಂಬಂತೆ ಭಾಸವಾಗುತ್ತಿತ್ತು.