ಪ್ರಕರಣವು ಜಯಪುರ ಠಾಣೆಗೆ ಸೇರುವುದಿಲ್ಲ ಎಂದು ಜಿಲ್ಲಾ ಪೊಲೀಸ್ ಇಲಾಖೆಯು ನಗರ ಪೊಲೀಸ ಕಮೀಷನರೇಟ್ಗೆ ವರ್ಗಾಯಿಸಿದೆ. ಆದರೆ, ಇದೇ ವ್ಯಾಪ್ತಿಯಲ್ಲಿನ ಹಲವು ಪ್ರಕರಣಗಳನ್ನು ಜಯಪುರ ಠಾಣೆಯ ಪೊಲೀಸರೇ ದಾಖಲಿಸಿಕೊಂಡಿದ್ದಾರೆ. ಆದರೆ, ಈ ಒಂದು ಪ್ರಕರಣ ಮಾತ್ರ ಕುವೆಂಪುನಗರಕ್ಕೆ ಹಸ್ತಾಂತರಿಸಿರುವುದು ಸಾರ್ವಜನಿಕರಲ್ಲಿ ಗೊಂದಲಕ್ಕೆ ಎಡೆ ಮಾಡಿದೆ. ‘ಒಂದು ವೇಳೆ ಏನಾದರು ತೊಂದರೆಯಾದರೆ ನಾವು ಯಾವ ಠಾಣೆಯನ್ನು ಸಂಪರ್ಕಿಸಬೇಕು’ ಎಂದು ಹೆಸರು ಹೇಳಲಿಚ್ಛಿಸದ ಸಾರ್ವಜನಿಕರೊಬ್ಬರು ಪ್ರಶ್ನಿಸಿದರು.