‘ಪ್ರಭುಚನ್ನಬಸವ ಶ್ರೀ, ಸಂಸ್ಕೃತ ಮತ್ತು ಕನ್ನಡ ಎಂ.ಎ. ಸ್ನಾತಕೋತ್ತರ ಪದವೀಧರರು. ಸುತ್ತೂರು ಮಠದ ಗುರುಕುಲ ಹಾಗೂ ಶಿವಯೋಗ ಮಂದಿರದಲ್ಲಿ ಅಧ್ಯಾತ್ಮ ಸಾಧನೆ ಕೈಗೊಂಡವರು. ಸಾಮಾಜಿಕ ಮತ್ತು ಧಾರ್ಮಿಕ ಕೈಂಕರ್ಯಗಳಲ್ಲಿ ಸಕ್ರಿಯವಾಗಿ ತೊಡಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಅಭಿರುಚಿ ಹೊಂದಿದ್ದಾರೆ. 20 ಕೃತಿಗಳನ್ನು ರಚಿಸಿದ್ದಾರೆ. 30 ಸಿ.ಡಿ.ಗಳನ್ನು ಹೊರತಂದಿದ್ದಾರೆ. ಅವರ ಸಾಹಿತ್ಯ ಸೇವೆಗೆ ಅನೇಕ ಪ್ರಶಸ್ತಿ–ಪುರಸ್ಕಾರಗಳು ಸಂದಿವೆ. ಅವರು ರಚಿಸಿರುವ, 216 ವಿಶ್ವವಿಭೂತಿಗಳ ಜೀವನ ಹಾಗೂ ಸಾಧನೆಗಳನ್ನು ಪರಿಚಯಿಸುವ ‘ಮಹಾತ್ಮರ ಚರಿತಾಮೃತ’ ಕೃತಿಗೆ ಪುರಸ್ಕಾರ ನೀಡಲಾಗುತ್ತಿದೆ’ ಎಂದು ಪ್ರಕಟಣೆ ತಿಳಿಸಿದೆ