ಇವರು ಸಾಲ ಮಾಡಿ ಆಟೊ ಖರೀದಿಸಿದ್ದರು. ಕಳೆದ ವಾರ ವ್ಯಕ್ತಿಯೊಬ್ಬರಿಗೆ ಗುದ್ದಿ ಪರಾರಿಯಾಗಿದ್ದರು. ಪೊಲೀಸರು ಆಟೊವನ್ನು ವಶಪಡಿಸಿಕೊಂಡರು. ಇದರಿಂದ ಹೆದರಿದ ಶಿವಕುಮಾರ್ ಸೆಲ್ಫಿ ವಿಡಿಯೊ ಮಾಡಿ ಗಾಯಾಳುವಿನ ಕ್ಷಮೆ ಕೋರಿ, ಕುಟುಂಬದ ಸದಸ್ಯರಿಗೆ ತೊಂದರೆ ನೀಡಬಾರದು ಎಂದು ಮನವಿ ಮಾಡಿ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.