ಕೋವಿಡ್-19 ಕಾರಣದಿಂದ ರಂಗಭೂಮಿ ಸಂಕಷ್ಟ ಅನುಭವಿಸಿದ್ದು, ಈ ಮಧ್ಯೆ ಮೈಸೂರು ರಂಗಾಯಣವು ರಂಗಭೂಮಿಯನ್ನು ಚಟುವಟಿಕೆಯಿಂದ ಇರುವಂತೆ ನೋಡಿಕೊಂಡಿದೆ. ಕೊರೊನಾ ಸೋಂಕಿನ ವಿರುದ್ಧ ಜಾಗೃತಿ ಮೂಡಿಸಲು ಎಚ್.ಕೆ.ದ್ವಾರಕಾನಾಥ್ ರೂಪಿಸಿದ 50 ಅಡಿ ಉದ್ದದ ಭಿತ್ತಿಚಿತ್ರ ಕಾರ್ಯಕ್ರಮ `ಸಂಭವಾಮಿ ಯುಗೇ ಯುಗೇ’ ನಡೆದಿದೆ. ರಂಗಾಯಣದ ಪ್ರಯೋಗಶೀಲ ನಾಟಕ `ಪರ್ವ' ಪ್ರದರ್ಶನಕ್ಕೆ ಸಿದ್ಧತೆ ನಡೆದಿದ್ದು, ನಿರ್ದೇಶಕ ಶ್ರೀ ಪ್ರಕಾಶ್ ಬೆಳವಾಡಿ ರಂಗಪಠ್ಯದ ರಚನೆ ಪೂರ್ಣಗೊಳಿಸಿದ್ದಾರೆ ಎಂದರು.