ಮೈಸೂರು: ಯುವಕರು ತಮ್ಮ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಲು ಸಕಾರಾತ್ಮಕವಾಗಿ ಆಲೋಚನೆ ಮಾಡಬೇಕು ಎಂದು ದಕ್ಷಿಣ ವಲಯದ ಪೊಲೀಸ್ ಮಹಾನಿರೀಕ್ಷಕ ವಿಪುಲ್ ಕುಮಾರ್ ಸಲಹೆ ನೀಡಿದರು.
ನೆಹರೂಯುವ ಕೇಂದ್ರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯ ಜನ್ಮದಿನಾಚರಣೆ ಅಂಗವಾಗಿ ಯೂತ್ ಹಾಸ್ಟೆಲ್ನಲ್ಲಿ ಗಾಂಧೀಜಿ ಹಾಗೂ ಶಾಸ್ತ್ರಿ ಭಾವಚಿತ್ರಕ್ಕೆ ಪುಷ್ಪಾರ್ಚನೆಮಾಡಿ ಮಾತನಾಡಿದರು.
‘ಯುವಜನರಿಗೆ ಜೀವನ ಕೌಶಲ ನಿರ್ವಹಣೆ’ ಕಾರ್ಯಕ್ರಮ ಉದ್ಘಾಟಿಸಿದ ಅವರು, ಮಾದಕ ವಸ್ತು ಮತ್ತು ಮದ್ಯಪಾನ ಸೇವನೆಯಿಂದ ಸಮಾಜದ ವಾತಾವರಣ ಹದಗೆಡುವುದರ ಜೊತೆಗೆ ಜೀವನವೂ ಹದಗೆಡುತ್ತದೆ. ಹೀಗಾಗಿ, ದುಶ್ಚಟಗಳಿಂದ ದೂರವಿರಿ ಎಂದು ಕಿವಿಮಾತು ಹೇಳಿದರು.
ಲೋಕಾಯುಕ್ತ ಪೊಲೀಸ್ ಅಧೀಕ್ಷಕಿ ಪಿ.ವಿ.ಸ್ನೇಹಾ, ನೆಹರೂ ಯುವ ಕೇಂದ್ರದ ಜಿಲ್ಲಾ ಸಂಯೋಜಕ ಎಸ್.ಸಿದ್ದರಾಮಪ್ಪ, ಮಹಾರಾಣಿ ಮಹಿಳಾ ಕಾಲೇಜಿನ ಪ್ರಾಧ್ಯಾಪಕಿ ಮನೋನ್ಮಣಿ, ಕ್ರೆಡಿಟ್-ಐ ಸಂಸ್ಥೆಯ ಎಂ.ಪಿ.ವರ್ಷ ಇದ್ದರು.